ಮಡಿಕೇರಿ: ಪೊನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ಬುಡಕಟ್ಟು ಸಮುದಾಯದವರು ಕಳೆದ ಏಳು ತಿಂಗಳಿನಿಂದ ನಿವೇಶನಕ್ಕಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಇದುವರೆಗೆ ಜಿಲ್ಲಾಡಳಿತವಾಗಲಿ ಜನ ಪ್ರತಿನಿಧಿಗಳಾಗಿ ತಮ್ಮ ಕೋರಿಕೆಗೆ ಮನಣ್ಣೆ ನೀಡದರಿಂದ ಇಂದಿನಿಂದ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲು ಪ್ರತಿಭಟನೆಕಾರರು ನಿರ್ಧರಿಸಿದ್ದಾರೆ.
ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 4500ಕ್ಕೂ ಹೆಚ್ಚು ಕುಟುಂಬಗಳು ನಿವೇಶನರಹಿತರಾಗಿದ್ದು ಲೈನ್ ಮನೆಯಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ನೀಡಲು ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ.
ಈಗಾಗಲೇ ಐಟಿಡಿಪಿ ಇಲಾಖೆಯಲ್ಲಿ 76 ಎಕರೆ ಜಾಗ ಬುಡಕಟ್ಟು ಸಮುದಾಯದ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ, ಆದರೆ ಇದುವರೆಗೂ ಕೂಡ ಜಾಗವನ್ನು ವಿಲೇವಾರಿ ಮಾಡದೆ ಇಲಾಖೆಯ ಅಧಿಕಾರಿಗಳು ಕರ್ತವ್ಯ ಪಾಲನೆ ಮಾಡುತ್ತಿಲ್ಲ ಎಂದು ಸಂಘದ ಅಧ್ಯಕ್ಷರಾದ ಗಪ್ಪು ಧೂರಿಕೊಂಡಿದ್ದಾರೆ.
ಪೊನ್ನಂಪೇಟೆ ತಾಲೂಕಿನಲ್ಲಿ ಒಟ್ಟು 456 ಬುಡಕಟ್ಟು ಸಮುದಾಯದ ಕುಟುಂಬಗಳು ನಿವೇಶನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಹಾಗೆ ತಾಲೂಕಿನ ಎಲ್ಲಾ ಪಂಚಾಯಿತಿಗಳಲ್ಲೂ ಕೂಡ ಅರ್ಜಿಗಳನ್ನು ನೀಡಲಾಗಿದೆ.