News Karnataka Kannada
Monday, April 29 2024
ಮಡಿಕೇರಿ

ಮಡಿಕೇರಿ: ಅಗ್ನಿಪಥ್ ಅಭ್ಯರ್ಥಿಗಳಿಗೆ ಆ.7ಕ್ಕೆ ಓಟ ಸ್ಪರ್ಧೆ

Madikeri: Agneepath candidates to compete on Aug 7
Photo Credit : By Author

ಮಡಿಕೇರಿ: ಅಗ್ನಿಪಥ್‌ಯೋಜನೆಯಡಿ ಸೇನೆಗೆ ಸೇರಲುಅರ್ಜಿಹಾಕಿರುವ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿಯುವ ಬಂಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿರುವ ‘ಅಗ್ನಿವೀರ್ 2022’ ರಸ್ತೆಓಟ ಸ್ಪರ್ಧೆಆಗಸ್ಟ್ 7ರಂದು ನಡೆಯಲಿದೆ.

ಮಡಿಕೇರಿ ಹೊರವಲಯದಕ್ಲಬ್ ಮಹೀಂದ್ರ ಬಳಿಯಿಂದ ಆರಂಭವಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಕಾಲೇಜುಗೇಟ್ ಬಳಿ ಕೊನೆಗೊಳ್ಳಲಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ್‌ರೈ ತಿಳಿಸಿದ್ದಾರೆ.

ಬೆಳಗ್ಗೆ 9.30ಕ್ಕೆ ಸ್ಪರ್ಧೆಆರಂಭವಾಗಲಿದ್ದು, ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಜಗದೀಶ್‌ರೈ, ಐತಪ್ಪರೈ, ಬಿ.ಕೆ. ರವೀಂದ್ರರೈ, ಜಯಪ್ರಕಾಶ್‌ರೈ, ಮಡಿಕೇರಿ ನಗರಸಭೆ ಸದಸ್ಯಅರುಣ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ನಂತರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಕಾಲೇಜುಆವರಣದಲ್ಲಿ ಪುಲ್‌ಅಪ್ಸ್ ಸ್ಪರ್ಧೆಇರಲಿದೆ. ಬಳಿಕ ಬಾಲಭವನ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ಹಾಗೂ ಪ್ರಶಸ್ತಿ ವಿತರಣೆ ನೆರವೇರಲಿದೆ. ಸಂಘದಅಧ್ಯಕ್ಷ ವಸಂತರೈಅಧ್ಯಕ್ಷತೆಯಲ್ಲಿ ನಡೆಯುವಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಜಯಪ್ರಕಾಶ್‌ರೈ, ಐತಪ್ಪರೈ ಉಪಸ್ಥಿತರಿರಲಿದ್ದು, ಮಕ್ಕಳ ತಜ್ಞ ವೈದ್ಯ ಹಾಗೂ ನಿವೃತ್ತ ಸೇನಾಧಿಕಾರಿಮೇಜರ್‌ಡಾ. ಕುಶ್ವಂತ್ ಕೋಳಿಬೈಲು ಮುಖ್ಯ ಭಾಷಣ ಮಾಡಲಿದ್ದಾರೆ.

ಜಿಲ್ಲೆಯ ವಿವಿದೆಡೆಯ ನೂರಕ್ಕೂಅಧಿಕ ಮಂದಿ ಅಭ್ಯರ್ಥಿಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಓಟ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದತಲಾ ನಾಲ್ಕು ಸ್ಪರ್ಧಿಗಳಿಗೆ ಹಾಗೂ ಪುಲ್‌ಅಪ್ಸ್ನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ವಿಶೇಷ ಬಹುಮಾನ ನೀಡಲಾಗುವುದು. ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸ್ಪರ್ಧಿಗೆ ವಿಶೇಷ ಉಡುಗೊರೆ ನೀಡಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು