ಕೊಡಗು: ಕೊಡಗು ಮೈಸೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷಣ್ ರವರು ಕಣಕ್ಕಿಳಿಯುವುದು ಖಚಿತವಾಗಿದೆ. ಪಕ್ಷದ ಅಧಿಕೃತ ಪಟ್ಟಿ ಒಂದೇ ಬಿಡುಗಡೆಗೆ ಬಾಕಿ ಇದೆ. ಲಕ್ಷ್ಮಣ್ ಅವರು ಕಾಂಗ್ರೆಸ್ ವಕ್ತಾರರಾಗಿ ಮೈಸೂರು ಭಾಗದಲ್ಲಿ ಹೆಚ್ಚು ಹೆಸರು ಗಳಿಸಿದವರು. ನೇರ ನುಡಿ, ವಿರೋಧಿ ಪಾಳ್ಯದ ವಿರುದ್ಧ ತನ್ನದೇ ದಾಟಿಯಲ್ಲಿ ಪ್ರಶ್ನಿಸಿ ಅವರನ್ನು ಸಿಲುಕಿಸುವ ತಂತ್ರಗಾರಿಕೆ ಹೊಂದಿದ್ದಾರೆ.
ಕೊಡಗಿನಲ್ಲಿ ಈ ಹಿಂದೆ ಸಿದ್ದರಾಮಯ್ಯನವರು ಭೇಟಿ ನೀಡಿದಾಗ ಮೊಟ್ಟೆ ಎಸದ ಹಗರಣ ಸಂಬಂಧಿಸಿದಂತೆ ಅಂದಿನ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಟೆ ತೆಗೆದುಕೊಂಡಿದ್ದರು. ವಿಧಾನಮಂಡಳದಲ್ಲೂ ಕೂಡ ಲಕ್ಷ್ಮಣ್ ಅವರ ಪ್ರಶ್ನೆಗೆ ಉತ್ತರಿಸಿ ಎಂದು ಸಿದ್ದರಾಮಯ್ಯನವರು ಬಿಜೆಪಿಯವರಿಗೆ ತರಟಾಗೆ ತೆಗೆದುಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಗೆಳೆಯರಾಗಿರುವ ಲಕ್ಷ್ಮಣ್, ಪ್ರತಾಪ್ ಸಿಂಹ ಅವರ ಕೆಲವು ವೈಫಲ್ಯಗಳನ್ನು ಕೂಡ ಬಹಿರಂಗಪಡಿಸಿದ್ದರು.
BE,,AMIE ಇಂಜಿನಿಯರ್ ಪದವೀಧರಾದ ಲಕ್ಷ್ಮಣ್ ಅವರು ಸ್ಥಿತಿವಂತರೂ ಕೂಡ ಹೌದು. ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಅವರು ಪರಭವಗೊಂಡಿದ್ದರು. ಕೊಡಗಿನಲ್ಲಿ ಸತತವಾಗಿ ಕಳೆದ ಮೂರು ವರ್ಷಗಳಿಂದ ಆಗಾಗ ಕಾಣಿಸಿಕೊಳ್ಳುತ್ತಿರುವ ಲಕ್ಷ್ಮಣ್ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪಕ್ಷದ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಬಲಮೂಲಗಳೆಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ, ಕೆಪಿಸಿಸಿಯ ಸದಸ್ಯರು ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಪರಭೌಗೊಂಡ ಹಿರಿಯ ವಕೀಲರಾದ ಚಂದ್ರ ಮೌಳಿ ರವರು ಕೂಡ ಆಕಾಂಕ್ಷಿಗಳಾಗಿದ್ದರು. ಕೊಡ್ಲಿಪೇಟೆಯ ಗೋಪಾಲಗೌಡ ಆಸ್ಪತ್ರೆಯ ಡಾ.ಸುಶ್ರುತ ಗೌಡ, ಕೊಡಗಿನಿಂದ ಮೈಸೂರು ವರೆಗೆ ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಿ ಕೊಡಗು ಹಾಗೂ ಮೈಸೂರಿನ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಸಣ್ಣ ಧ್ವನಿವರ್ಧಕದ ಮೂಲಕ ಜನರನ್ನು ಸೇರಿಸಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದ ಜೆ. ಜೆ.ಆನಂದ್ ರವರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಾಗಿ ಎಲ್ಲಾ ನಾಯಕರಗಳ ಕೈಕಾಲು ಹಿಡಿದಿದ್ದರು.
ಉಳಿದಂತೆ ಕೊನೆ ಗಳಿಗೆಯಲ್ಲಿ ಸಿದ್ದರಾಮಯ್ಯನವರ ಪುತ್ರ ಡಾಕ್ಟರ್ ಯತೀಂದ್ರ ರವರು ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡಿತ್ತು. ಆದರೆ ಈಗ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ನಾಯಕರಾದ ಎಂ ಲಕ್ಷ್ಮಣ್ ರವರಿಗೆ ಪಕ್ಷ ಮಣೆ ಹಾಕಿದೆ ಎಂದು ಹೇಳಲಾಗುತ್ತಿದೆ.