ನಾಗರ್ಕರ್ನೂಲ್: ಕಾಂಗ್ರೆಸ್ ಮತ್ತು ಬಿಆರ್ಎಸ್ ತೆಲಂಗಾಣದ ಎಲ್ಲಾ ಕನಸುಗಳನ್ನು ಭಗ್ನಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಾಗರ್ಕರ್ನೂಲ್ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಇಂದು ತೆಲಂಗಾಣ ಜನರು ಮೂರನೇ ಬಾರಿಗೆ ಮೋದಿಯನ್ನು ಅಧಿಕಾರಕ್ಕೇರಿಸಲು ನಿರ್ಧರಿಸಿರುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆ 2024 ದಿನಾಂಕವನ್ನು ದೆಹಲಿಯಲ್ಲಿ ಸ್ವಲ್ಪ ಸಮಯದ ನಂತರ ಪ್ರಕಟಿಸಲಾಗುವುದು. ಆದರೆ, ಚುನಾವಣಾ ದಿನಾಂಕಗಳು ಅಧಿಕೃತವಾಗಿ ಘೋಷಣೆಯಾಗುವ ಮೊದಲೇ ದೇಶದ ಜನರು ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ದೇಶವು ‘ಅಬ್ ಕೀ ಬಾರ್ 400 ಪಾರ್’ ಎಂದು ಘೋಷಿಸಿದೆ. ನಾಗರ್ಕರ್ನೂಲ್ನಲ್ಲಿರುವ ಜನಸಮೂಹವು ಅದಕ್ಕೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
There is immense support for the BJP’s development agenda across Telangana. The vibrancy at the rally in Nagarkurnool is exceptional.https://t.co/SLM0VXnmD6
— Narendra Modi (@narendramodi) March 16, 2024