ಕುಶಾಲನಗರ: ನಗರದ ಬದ್ರು ನಿಸಾ ಬಡಾವಣೆಯಲ್ಲಿ ಪಾರ್ಕ್ ಮೀಸಲಿಟ್ಟಿದ್ದ 20 ಸೆಂಟ್ ಜಾಗವನ್ನು ಪಂಚಾಯಿತಿ ನೌಕರ ಹಾಗೂ ಕೂಡ ಅಧ್ಯಕ್ಷರು ಸೇರಿ ಪಾರ್ಕ್ ಜಾಗಕ್ಕೆ ಕೂಡ ಅಧ್ಯಕ್ಷರ ಹೆಸರಿನಲ್ಲಿ ದಾಖಲೆ ಸೃಷ್ಟಿ ಮಾಡಿ ನದಿ ಸಮೀಪದಲ್ಲಿರುವ ಪ್ರವಾಹಕ್ಕೆ ತುತ್ತಾಗುವ ಜಾಗವನ್ನು ಪಾರ್ಕ್ ಜಾಗವೆಂದು ತೋರಿಸಿ ಊರಿನ ಜನತೆಯನ್ನು ವಂಚಿಸುತ್ತಿರುವುದು ಸೂಚನೆಯ ಹಾಗೂ ಇಷ್ಟೆಲ್ಲಾ ಅಕ್ರಮ ನಡೆದರೂ ಪುರಸಭೆ ಮೌನವಾಗಿರುವುದು ನಮ್ಮ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್ ಅಸಮಾಧಾನ ವ್ಯಕ್ತಪಡಿಸಿದಾರೆ.
ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಮೌಕಿಕವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು ಅಧಿಕಾರಿಗಳು ಪಾರ್ಕ್ ಜಾಗವನ್ನು ವಸಪಡಿಸಿಕೊಳ್ಳದೆ ಕಾನೂನು ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಪಾರ್ಕ್ ಜಾಗವನ್ನು ವಸಪಡಿಸಿಕೊಂಡಿಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಭೆ ತೀರ್ಮಾನಿಸಿತು.
ವಾರ್ಡಿನ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ, ಮಂಜುನಾಥ್ ಗುಂಡು ರಾವ್, ಮತ್ತಿತರರು ಉಪಸ್ಥಿತರಿದ್ದರು.