ಶಿವಮೊಗ್ಗ: ಶಿವಮೊಗ್ಗ ತಾಲೂಕು ಬೀರನ ಹಳ್ಳಿ ಮತ್ತು ಕುಂಚೇನ ಹಳ್ಳಿಯ ನಡುವಿನ ಸವಳಂಗ ರಸ್ತೆಯಲ್ಲಿ ಚಲಿಸುತ್ತಿರುವ ವಾಹನದಲ್ಲಿ ದಿಡೀರ್ ಅಂತ ಬೆಂಕಿ ಕಾಣಿಸಿಕೊಂಡಿದ್ದು ಧಗ ಧಗ ಉರಿದಿದೆ.
ನಿನ್ನೆ ರಾತ್ರಿ 8-30 ರ ಸಮಯದಲ್ಲಿ ಹಾಸನದಿಂದ ಸವಳಂಗ ರಸ್ತೆ ಕಡೆ ತೆರಳುತ್ತಿದ್ದ ಡಸ್ಟರ್ ವಾಹನ ಬೆಂಕಿಗೆ ಆಹುತಿ ಆಗಿದೆ. ಸವಳಂಗದ ಬಳಿ ಪ್ಲಾಙಟೇಷನ್ ಒಂದಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ಶಾರ್ಟ್ ಸೆರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಖಲೀದ್ ಖಾನ್ ಎಂಬುವರಿಗೆ ಈ ಕಾರು ಸೇರಿದ್ದು, ಎಂಬ ಮಾಹಿತಿ ತಿಳಿದುಬಂದಿದೆ.
ಸ್ಥಳೀಯರು ಮತ್ತು ಅಗ್ನಿ ಶಾಮಕ ದಳ ಸ್ಥಳಕ್ಕೆ ಬರುವ ಮುಂಚೆಯೇ ವಾಹನ ಹೊತ್ತಿ ಉರಿದಿದೆ. ಯಾವ ಅನಾಹುತವಾಗಿಲ್ಲವೆಂದು ಸಧ್ಯಕ್ಕೆ ಇರುವ ಮಾಹಿತಿಯಾಗಿದೆ. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ