ಕೊಡಗು: ಒಂದೆಡೆ ಕೊಡಗಿನ ವಿವಿಧ ಭಾಗದಲ್ಲಿ ಇದೀಗ ಕಾಫಿ ಹಣ್ಣಾಗುವ ಸಂದರ್ಭದಲ್ಲಿ ಮಳೆಯ ಕಾರಣದಿಂದ ಕಾಫಿ ಹಣ್ಣುಗಳು ಒಡೆದು ಕಾಫಿ ಬೀಜ ಗಳಿಗೆ ಹಾನಿ ಉಂಟಾಗಿದೆ ಈ ನಡುವೆ ಸರ್ಕಾರ ಕಳೆದೆರಡು ವರ್ಷಗಳು ಬೆಳೆ ನಷ್ಟ ಪರಿಹಾರವನ್ನು ಘೋಷಿಸಿದೆ. ಆದರೆ ಸಮರ್ಪಕ ಆಡಳಿತ ನ್ಯೂನ್ಯತೆಯಿಂದ ಬೆಳೆಗಾರರಿಗೆ ಶೇಕಡ ಅರ್ಧದಷ್ಟು ಮಾತ್ರ ಬೆಳೆ ಪರಿಹಾರ ದೊರಕುತ್ತಿದೆ.
ಪೊನ್ನಂಪೇಟಿ ತಾಲೂಕು ಹುದಿಕೇರಿ ಹೋಬಳಿಯ ಗ್ರಾಮ ಲೆಕ್ಕಿಗ ಮಾಡಿರುವ ಎಡವಟ್ಟಿನಿಂದ ಹಲವರಿಗೆ ಪೂರ್ಣ ಪ್ರಮಾಣದಲ್ಲಿ ದೊರಕಬೇಕಾದ ಬೆಳೆ ಪರಿಹಾರ ಶೇಕಡ ಅರ್ಧದಷ್ಟು ಮಾತ್ರ ದೊರಕಿದ್ದಂತಾಗಿದೆ. ಬಿರುನಾಣಿ ಗ್ರಾಮದ ಕೆ.ಬಾಲಕೃಷ್ಣ ಭಟ್ ಎಂಬವರು ತನ್ನ 3 ಎಕರೆ ಕಾಫಿ ತೋಟಕ್ಕೆ ಬೆಳೆ ಪರಿಹಾರಕಾಗಿ ಅರ್ಜಿ ಹಾಕಿದ್ದರು. ಸರ್ಕಾರದ ನಿಯಮದಂತೆ ಒಂದು ಎಕರಿಗೆ ಬಹು ವಾರ್ಷಿಕ ಬೆಳೆಗೆ ಏಕರಿಗೆ 10000 ಘೋಷಿಸಲಾಗಿತ್ತು. ಆದರೆ ಈ ಗ್ರಾಮ ಲೆಕ್ಕಿಗ ಪುಣ್ಯಾತ್ಮ ಸಂತೋಷ್ ಎಂಬುವನು ವಾರ್ಷಿಕ ಬೆಳೆ ಎಂದು ಘೋಷಿಸಿ ಎಕರೆಗೆ 6000 ದಂತೆ ಇದೀಗ ಬಾಲಕೃಷ್ಣ ಭಟ್ಟವರಿಗೆ 16,139 ಪರಿಹಾರ ಹಣ ದೊರಕಿದೆ. ಇವರಿಗೆ ಬಹುವಾರ್ಷಿಕ ಬೆಳೆಯ ಅನ್ವಯ ಮೂವತ್ತು ಸಾವಿರಕ್ಕಿಂತ ಹೆಚ್ಚು ಹಣ ದೊರಕಬೇಕಾಗಿತ್ತು.
ಈ ಬಗ್ಗೆ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ವಿಚಾರಿಸಿದಾಗ ಸರಕಾರಕ್ಕೆ ಕಳಿಸಿರುವ ವರದಿಯಲ್ಲಿ ವಾರ್ಷಿಕ ಬೆಳೆ ಕಾಫಿ ಎಂದು ನಮೂದಿಸಿ ಗ್ರಾಮ ಲೆಕ್ಕಿಗ ಕಳಿಸಿದ್ದರಿಂದ ಅದರ ಅನ್ವಯ ಇವರಿಗೆ ಪರಿಹಾರ ಹಣ ದೊರಕಿದೆ . ಇನ್ನೂ ಸರ್ಕಾರಕ್ಕೆ ಪತ್ರ ಬರೆದು ಕಾಫಿ ಬೆಳೆ ಬಹು ವಾರ್ಷಿಕ ಬೆಳೆ ಎಂದು ನಮೂದಿಸಿ ತಿದ್ದುಪಡಿಗೆ ಬರೆದುಕೊಂಡರೆ ಹಣ ಬಂದರೆ ಬಂದಿತು ಎಂಬ ಉತ್ತರ ಇವರಿಗೆ ದೊರಕಿದೆ. ಕಳೆದ ವರ್ಷವೂ ಕೂಡ ಇವರಿಗೆ ಶೇಕಡ ಅರ್ಧದಷ್ಟು ಮಾತ್ರ ಹಣ ದೊರಕಿದೆ. ಮುಂದೆ ಸಿಗಬಹುದು ಎಂಬ ಗ್ರಾಮ ಲೆಕ್ಕಗಿನ ಉತ್ತರದಿಂದ ತೃಪ್ತಿಪಟ್ಟುಕೊಂಡು ಸುಮ್ಮನಿದ್ದರೂ. ಆದರೆ ಈ ಬಾರಿಯೂ ಕೂಡ ಹಣ ಅರ್ಧದಷ್ಟು ಬಂದಾಗ ಸಂಶಯಗೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದೇ ರೀತಿ ಜಿಲ್ಲೆಯ ಹಲವರಿಗೆ ಅನ್ಯಾಯವಾಗಿರುವ ಸಂಶಯವಿದ್ದು ಬೆಳೆ ಪರಿಹಾರ ಹಣ ಸಮರ್ಪಕವಾಗಿ ಸಿಗದಿದ್ದಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೋಗಿ ಪರಿಶೀಲಿಸುವುದು ಸೂಕ್ತ ಎಂದು ಬಾಲಕೃಷ್ಣ ಭಟ್ಟವರು ತಿಳಿಸಿದ್ದಾರೆ.