ಕೊಡಗು: ಸಮಗ್ರ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೊಳಂದಂಡ ಬಿ.ಕಾವೇರಿ (ತಾಮನೆ-ಬಲ್ಟಿಕಾಳಂಡ) ಅವರನ್ನು ಇದೀಗ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ.
ಈ ಹಿಂದೆ ಕಾವೇರಿ ಅವರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ, ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಲ್ಟಿಕಾಳಂಡ ಬೆಳ್ಯಪ್ಪ ದಂಪತಿಗಳ ಪುತ್ರಿಯಾಗಿರುವ ಕಾವೇರಿ ಮೂಲತಃ ಕಾರುಗುಂದದವರಾದ ಬೊಳಂದಂಡ ಮುತ್ತಣ್ಣ ಅವರ ಧರ್ಮಪತ್ನಿ.