News Karnataka Kannada
Monday, May 06 2024
ಮಡಿಕೇರಿ

ಸೆ.29 ರಂದು ಕೊಡಗು ಜಿಲ್ಲೆಯಲ್ಲಿ ಮಧುಮೇಹ ತಪಾಸಣಾ ಶಿಬಿರ

New Project (10)
Photo Credit :

ಕೊಡಗು: ಅಂತರರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಮೂಲಕ ವಿಶ್ವ ಹೖದಯ ದಿನಾಚರಣೆಯ ಪ್ರಯುಕ್ತ ಸೆ.29 ರಂದು ಕೊಡಗು ಜಿಲ್ಲೆಯಲ್ಲಿ ಮಧುಮೇಹ ತಪಾಸಣಾ ಶಿಬಿರಗಳನ್ನು ಮಧುಮೇಹ ಸೋಲಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾಗುತ್ತಿದ್ದು ಸುಮಾರು 2 ಸಾವಿರ ಮಂದಿಗೆ ಜಿಲ್ಲೆಯಲ್ಲಿ ಮಧುಮೇಹ ತಪಾಸಣೆ ಕೈಗೊಳ್ಳುವ ಗುರಿ ಹೊಂದಲಾಗಿದೆ ಎಂದು ರೋಟರಿ ವಲಯ 6 ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮತ್ತು ವಲಯ ಕಾರ್ಯದರ್ಶಿ ಎಸ್.ಎಸ್.ವಸಂತ ಕುಮಾರ್ ತಿಳಿಸಿದ್ದಾರೆ.

ಆರೋಗ್ಯ ಸಂಬಂಧಿತ ಯೋಜನೆಗಳಿಗೆ ಆದ್ಯತೆ ನೀಡಿರುವ ರೋಟರಿ ಸಂಸ್ಥೆಯು ಸೆ.29 ರಂದು ಭಾರತದಾದ್ಯಂತ ಮಧುಮೇಹ ತಪಾಸಣೆಯನ್ನು ಬೖಹತ್ ರೀತಿಯಲ್ಲಿ ಕೈಗೊಳ್ಳುತ್ತಿದ್ದು ಒಂದು ದೇಶ, ಒಂದು ದಿನ, 10 ಲಕ್ಷ ಮಂದಿಯ ತಪಾಸಣೆ ಎಂಬ ಗುರಿಯೊಂದಿಗೆ ಏಷ್ಯಾ ಖಂಡದಲ್ಲಿ ಹೊಸ ದಾಖಲೆಗೆ ರೋಟರಿ ಸಂಸ್ಥೆ ಮುಂದಾಗಿದೆ ಎಂದು ಅನಿಲ್ ಮತ್ತು ವಸಂತ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊಡಗಿನಲ್ಲಿಯೂ ರೋಟರಿ ಕ್ಲಬ್ ಗಳು ಸೆ.29 ರಂದು ಬುಧವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಧುಮೇಹ ತಪಾಸಣೆಯನ್ನು ಉಚಿತವಾಗಿ ಮಧುಮೇಹ ಸೋಲಿಸಿ ಎಂಬ ವಾಕ್ಯದೊಂದಿಗೆ ಚಳವಳಿ ರೂಪದಲ್ಲಿ ಕೈಗೊಳ್ಳುತ್ತಿವೆ. ಮಡಿಕೇರಿ ರೋಟರಿ, ಮಡಿಕೇರಿ ಮಿಸ್ಟಿ ಹಿಲ್ಸ್, ಗೋಣಿಕೊಪ್ಪ, ಶನಿವಾರಸಂತೆ,, ವೀರಾಜಪೇಟೆ, ಕುಶಾಲನಗರ ರೋಟರಿ ವತಿಯಿಂದ ಮಧುಮೇಹ ತಪಾಸಣೆ ಶಿಬಿರಗಳು ಬುಧವಾರ ವಿವಿಧ ಪ್ರದೇಶಗಳಲ್ಲಿ ಜರುಗಲಿದ್ದು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಅನಿಲ್ ಕೋರಿದ್ದಾರೆ.

ಭಾರತದಾದ್ಯಂತ ಮಧುಮೇಹವನ್ನು ತೊಡೆದು ಹಾಕುವ ಉದ್ದೇಶದಿಂದ ಮಧುಮೇಹದ ಬಗ್ಗೆ ಜನರಲ್ಲಿ ಜಾಗೖತಿ ಉಂಟು ಮಾಡುವ ನಿಟ್ಟಿನಲ್ಲಿ ಈ ಶಿಬಿರವನ್ನು ರೋಟರಿ ಸಂಸ್ಥೆಗಳು ದೇಶವ್ಯಾಪಿ ಆಯೋಜಿಸುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಮಧುಮೇಹ ತಪಾಸಣೆ ನಡೆಸಲಾಗುತ್ತದೆ. ಬಳಿಕ ಮಧುಮೇಹ ತಡೆಯುವ ಜಾಗೖತಿ ಮಾಹಿತಿ ನೀಡಲಾಗುತ್ತದೆ. ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಧುಮೇಹಿಗಳಿದ್ದಾರೆ.

ಸೈಲೆಂಟ್ ಕಿಲ್ಲರ್ ಎನಿಸಿರುವ ಮಧುಮೇಹ ತಮಗೆ ಇರುವುದೇ ಹಲವರಿಗೆ ತಿಳಿದಿರುವುದಿಲ್ಲ. ಬೇರೆ ಕಾಯಿಲೆಗಳಿಂದ ಆಸ್ಪತ್ರೆಗೆ ತೆರಳಿ ತಪಾಸಣೆ ಕೈಗೊಂಡಾಗ ಮಧುಮೇಹ ಇರುವುದು ಖಚಿತವಾಗುತ್ತದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲಿಯೇ ಮಧುಮೇಹವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮೂಲಕ ಮಧುಮೇಹ ನಿವಾರಣೆಗೆ ರೋಟರಿ ಸಂಸ್ಥೆ ಈ ಕಾಯ೯ಕ್ರಮ ಆಯೋಜಿಸುತ್ತಿದೆ ಎಂದು ಅನಿಲ್ ಮತ್ತು ವಸಂತ್ ತಿಳಿಸಿದ್ದಾರೆ.

ಮಧುಮೇಹವನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದ್ದೇ ಆದಲ್ಲಿ ಇದರ ನಿಯಂತ್ರಣ ಸುಲಭವಾಗಲಿದೆ. ಮಧುಮೇಹ ಪತ್ತೆಯಾದರೂ ಆತಂಕಪಡುವ ಅಗತ್ಯವಿಲ್ಲ. ಆಹಾರ ಕ್ರಮ ಮತ್ತು ಜೀವನ ಶೈಲಿಯ ಬದಲಾವಣೆ ಮೂಲಕ ಮಧುಮೇಹ ನಿಯಂತ್ರಣ ಸಾಧ್ಯವಿದೆ, ದೇಹದ ಮೇಲೆ ಇದರಿಂದ ಉಂಟಾಗುವ ಮತ್ತಷ್ಟು ದುಷ್ಪರಿಣಾಮವನ್ನು ಪ್ರಾರಂಭಿಕ ಹಂತದಲ್ಲಿಯೇ ತಪ್ಪಿಸಬಹುದಾಗದೆ ಎಂದೂ ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು