News Karnataka Kannada
Thursday, May 09 2024
ಮೈಸೂರು

ಹುಲ್ಲಹಳ್ಳಿ: ಹುಲಿ ದಾಳಿ, ಪ್ರಾಣಾಪಾಯದಿಂದ ರೈತ ಪಾರು

A tiger menace in Bandipur forest has not stopped
Photo Credit : Pixabay

ಹುಲ್ಲಹಳ್ಳಿ: ದನ ಮೇಯಿಸುತ್ತಿದ್ದ ರೈತನ ಮೇಲೆ ಹುಲಿಯೊಂದು ದಾಳಿ ಮಾಡಿದ ಘಟನೆ ಬಳ್ಳೂರುಹುಂಡಿ ಗ್ರಾಮದ ಬಳಿ ನಡೆದಿದ್ದು, ಅದೃಷ್ಟ ವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಮದ ನಿವಾಸಿ ರೈತ ಸ್ವಾಮಿದಾಸಯ್ಯ ಎಂಬುವರೇ ಹುಲಿ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ಇವರು ತಮ್ಮ ಜಮೀನಿನಲ್ಲಿ ದನ ಮೆಯಿಸುತ್ತಿದ್ದ ವೇಳೆ ಪೊದೆಯಲ್ಲಿ ಇದ್ದ ಹುಲಿ ಏಕಾಏಕಿ ದಾಳಿ ಮಾಡಿದೆ ಇದನ್ನು ಕಂಡ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ರೈತರು ಜೋರಾಗಿ ಕಿರುಚಾಡಿದ್ದಾರೆ ಇದರಿಂದ ಗಾಬ್ಬರಿಗೊಂಡ ಹುಲಿಯು ರೈತನನ್ನು ಬಿಟ್ಟು ಪರಾರಿಯಾಗಿದೆ.

ತಕ್ಷಣ ಸ್ಥಳದಲ್ಲಿದ್ದ ರೈತರು ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ತಕ್ಷಣ ಹುಲಿ ದಾಳಿಗೆ ಒಳಗೊಂಡ ರೈತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದೃಷ್ಟ ವಶಾತ್ ರೈತ ಸ್ವಾಮಿದಾಸಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾ.ಪಂ. ಮಾಜಿ ಅಧ್ಯಕ್ಷ ನಾಗೇಶ್ ರಾಜ್ ಮಾತನಾಡಿ ಬಳ್ಳೂರುಹುಂಡಿ ಗ್ರಾಮವು ಕಾಡಾಂಚಿನ ಗ್ರಾಮವಾಗಿದೆ ಇಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ ಇದನ್ನು ತಡೆಗಟ್ಟಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಂದಡೇ ರೈತರು ಬೆಳೆದ ಫಸಲನ್ನು ನಾಶ ಮಾಡಿದರೆ, ಇನ್ನೊಂದೆಡೆ ಮನುಷ್ಯರನ್ನೇ ಬಲಿ ಪಡೆಯುತ್ತಿವೆ. ಇದರಿಂದ ರೈತರು ಭಯದಲ್ಲಿ ಬದುಕುವಂತಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು