ಮೈಸೂರು: ನಗರದ ವಕೀಲ ಹೇಮಂತ್ಕುಮಾರ್ಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಅವಾರ್ಡ್-2022ನ್ನು ನೀಡಿ ಗೌರವಿಸಿದೆ.
ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಡಾ.ಸತ್ಯನಾರಾಯಣ್ ಜತಿಯಾ, ರೈಲ್ವೆ ಬೋರ್ಡ್ ಛೇಮರ್ನ್ ರಮೇಶ್ಚಂದ್ರ ರತನ್, ಸಂಸದ ಹೇಮಂತ್ ಗೋಡ್ಸೆ ಇತರರು ಪ್ರಶಸ್ತಿ ಪ್ರದಾನ ಮಾಡಿದರು. ಹೇಮಂತ್ಕುಮಾರ್ ಎಚ್.ಡಿ.ಕೋಟೆ ತಾಲೂಕಿನ ಜಿ.ಎಂ.ಹಳ್ಳಿಯವರು. ವಿದ್ಯಾರ್ಥಿ ದಿಸೆಯಿಂದಲೂ ಹಿಂದುಳಿದ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸಾಕಷ್ಟು ಹೋರಾಟ ಮಾಡಿದ್ದಾರೆ. ಇವರ ಸಮಾಜಮುಖಿ ಚಟುವಟಿಕೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದೆ.
ಕಾರ್ಯಕ್ರಮದಲ್ಲಿ ಡಾ.ಸತ್ಯನಾರಾಯಣ್ ಜತಿಯಾ, ರಮೇಶ್ಚಂದ್ರ ರತನ್, ಹೇಮಂತ್ ಗೋಡ್ಸೆ ಇದ್ದರು.