ಮೈಸೂರು: ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿದ ನಂಜನಗೂಡು ತಾಲೂಕು ಹೆಡಿಯಾಲ ಹೋಬಳಿ ಒಡೆಯನಪುರ ಗ್ರಾಮದ ಪುಟ್ಟಸ್ವಾಮಿಯವರ ಮನೆಗೆ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷರಾದ ಚಂದನ್ ಗೌಡ, ತಾಲ್ಲೂಕು ಅಧ್ಯಕ್ಷ ವೈ.ಎಲ್. ನವೀನ್ ಗೌಡ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸ್ವಾಂತನ ಹೇಳಿ ಧೈರ್ಯ ತುಂಬಿ ಧನಸಹಾಯ ಮಾಡಿದರು.
ಇದೇ ಸಂದರ್ಭ ಒಡೆಯನಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಈ ರೀತಿ ಪ್ರಾಣಿ ದಾಳಿಗೆ ಯಾವುದೇ ಜನರು ಬಲಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟಂತ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಲಾಯಿತು, ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಕಾರ್ಯದರ್ಶಿ ಹರೀಶ್ ಪಿ ಗೌಡ. ಸ್ವಾಮಿಗೌಡ, ಕಂದಸ್ವಾಮಿ, ಎಚ್ ಡಿ ಕೋಟೆ ತಾಲೂಕು ಘಟಕದ ಅಧ್ಯಕ್ಷ ಎಚ್.ವೈ. ನವೀನ್ ಗೌಡ, ಬೇಬಿ ಮಂಜುನಾಥ್. ಬಸವಣ್ಣ ಇನ್ನಿತರರು ಇದ್ದರು.
ಪುಟ್ಟಸ್ವಾಮಿ ಅವರು ಒಡೆಯನಪುರ ಗ್ರಾಮದ ಕಾಡಂಚಿನ ಗ್ರಾಮದಲ್ಲಿ ದನ ಮೇಯಿಸುತ್ತಿದ್ದಾಗ ಹಠತ್ತಾಗಿ ದಾಳಿ ಮಾಡಿದ ಹುಲಿ ಅವರನ್ನು ಕೊಂದು ಹಾಕಿತ್ತಲ್ಲದೆ, ಜಾನುವಾರನ್ನು ತಿಂದು ಹಾಕಿತ್ತು. ಸದ್ಯ ಹುಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆಯಾದರೂ ಇದುವರೆಗೆ ಹುಲಿ ಸೆರೆಸಿಕ್ಕಿಲ್ಲ. ಹುಲಿದಾಳಿಯ ಬಳಿಕ ಒಡೆಯನಪುರ ವ್ಯಾಪ್ತಿಯಲ್ಲಿ ರೈತರು ಜಮೀನಿನಲ್ಲಿ ಕೆಲಸ ಮಾಡಲು ಮನೆಯಿಂದ ಹೊರ ಹೋಗಲು ಭಯಪಡುವಂತಾಗಿದೆ.