News Karnataka Kannada
Monday, May 06 2024
ಹಾಸನ

ಕಾಡಾನೆಗಳ ದಾಂಧಲೆ: ಅಪಾರ ಪ್ರಮಾಣದ ಬೆಳೆ ಹಾನಿ

Wild elephant attacks: Huge crop damage
Photo Credit : News Kannada

ಸಕಲೇಶಪುರ : ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದು ವರೆದಿದ್ದು ಕಳೆದ ರಾತ್ರಿ ಹೆಬ್ಬನಹಳ್ಳಿ ಗ್ರಾಮದಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದ ಕಾಡಾನೆಗಳು ಮನೆಯ ಮುಂದೆ ಇಟ್ಟಿದ್ದ ಕಾಫಿ, ಮೆಣಸು ಸೇರಿದಂತೆ ಭತ್ತದ ಚೀಲಗಳನ್ನು ಚೆಲ್ಲಾಡಿದೆ.

ತಾಲೂಕಿನ ಬೆಳಗೋಡು ಹೋಬಳಿ ಹೆಬ್ಬನಹಳ್ಳಿ ಗ್ರಾಮದ ಪುಟ್ಟರಾಜು ಎಂಬವರ ಮನೆಯ ಮೇಲೆ ತಡರಾತ್ರಿ ದಾಳಿ ನಡೆಸಿದ ಎರಡು ಕಾಡಾನೆಗಳು ಸಂಗ್ರಹಿಸಿಟ್ಟಿದ್ದ ಭತ್ತದ ಚೀಲಗಳನ್ನು ಎಳೆದಾಡಿ ಅಪಾರ ಪ್ರಮಾಣದಲ್ಲಿ ನಾಶಪಡಿ ಸಿವೆ. ಇಷ್ಟಕ್ಕೆ ಸುಮ್ಮನಾಗದ ಕಾಡಾ ನೆಗಳು ಮನೆಯ ಸುತ್ತಮುತ್ತ ಇದ್ದ ಬ್ಯಾರಲ್, ಬಾಳೆ ಗಿಡಗಳು, ಪೈಪ್ ಗಳನ್ನು ನಾಶ ಪಡಿಸಿವೆ.

ಇದೇ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳ ಹಿಂದೆ ಮನು ಎಂಬ ಯುವ ರೈತನ ಮೇಲೆ ಕಾಡನೆ ಯೊಂದು ದಾಳಿ ನಡೆಸಿ ಕೊಂದು ಹಾಕಿದ್ದು ಮಾಸುವ ಮುನ್ನವೇ ಮನೆಗಳ ಮೇಲೆ ಕಾಡಾನೆಗಳ ದಾಳಿ ನಡೆಸಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕಳೆದ ತಿಂಗಳು ಕಾಡಾನೆ ಯಿಂದ ಬೇಸತ್ತ ರೈತರು ತಮ್ಮ ಜಮೀನಿನಲ್ಲಿ ತೋಡಿದ್ದ ಗುಂಡಿಗೆ ಕಾಡಾನೆ ಒಂದು ಬಿದ್ದು ಜೀವನ್ಮರ ಣದ ನಡುವೆ ಹೋರಾಟ ನಡೆಸಿತ್ತು ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರು ಅರಣ್ಯ ಇಲಾಖೆ ಮಾತ್ರ ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗಿದೆ.

ಕಾಡಾನೆ ದಾಳಿಗೆ ಭತ್ತ, ಕೃಷಿ ಸಲಕರಣೆಗಳು ನಾಶವಾಗಿರುವ ರೈತ ಪುಟ್ಟರಾಜ ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕಾಂಗ್ರೆಸ್ ಯುವ ಮುಖಂಡ ಭುವನಾಕ್ಷ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು