News Karnataka Kannada
Saturday, May 04 2024
ಹಾಸನ

ಬೇಲೂರು: ಕಾಫಿ ಕಳ್ಳನ ಮೇಲೆ ಅಮಾನವೀಯ ಹಲ್ಲೆ, ಐವರ ಬಂಧನ

Bantwal: Accused arrested for transporting cattle without licence
Photo Credit : Pexels

ಬೇಲೂರು: ಕಾಫಿ ಕದಿಯಲು ಬಂದು ಸಿಕ್ಕಿ ಬಿದ್ದ ಕಳ್ಳನಿಗೆ ಕೆಲವರು ಮನ ಬಂದಂತೆ ಥಳಿಸಿ ಅಮಾನವೀಯತೆ ಮೆರೆದಿರುವ ಘಟನೆ ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ನಡೆದಿದೆ.

ಪಕ್ಕದ ಗ್ರಾಮದ ಮಂಜು ಎಂಬಾತ ಕಳೆದ ರಾತ್ರಿ ಕಾಫಿ ಕದಿಯಲು ಹೋಗಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ತೋಟದ ಮಾಲಿಕ, ಇತರರ ಜೊತೆ ಸೇರಿ ಮಂಜುನನ್ನು ಹಿಡಿದು ಕೈಕಾಲು ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ರಾತ್ರಿ ಇಡೀ ಒಂದೇ ಕಡೆ ಬಿದ್ದು ನರಳುವಂತೆ ಮಾಡಿ ನಿರ್ದಯಿ ವರ್ತನೆ ತೋರಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ಮಂದಿ, ಬೆಳಗ್ಗೆ ಕಾಲಿಗೆ ಹಗ್ಗ ಬಿಗಿದು ತೋಟದ ಬಳಿಯ ಮರಕ್ಕೆ ಕಟ್ಟಿ ಮತ್ತೊಮ್ಮೆ ತಲೆಯಲ್ಲಿ ರಕ್ತ ಸೋರುವ ರೀತಿ ಥಳಿಸಿದ್ದಾರೆ. ತಲೆ ಕೆಳಗಾಗಿ ಮರಕ್ಕೆ ಕಟ್ಟಿ ದುವ್ರರ್ತನೆ ಪ್ರದರ್ಶನ ಮಾಡಿದ್ದಾರೆ.

ಕಾಫಿ ಕದಿಯೋದು ಬೇಕಿತ್ತಾ ನಿನಗೆ, ಹೊಲಸು ತಿನ್ನುವ ಕೆಲಸ ಮಾಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಅನ್ನೋ ಹಾಗೆ ದೊಣ್ಣೆ ಇತರೆ ವಸ್ತುಗಳಿಂದ ಥಳಿಸಿದ್ದಾರೆ. ಸಿಕ್ಕಿ ಬಿದ್ದ ಯುವಕ ನಿಮ್ಮ ದಮ್ಮಯ್ಯ ಹೊಡೀಬೇಡಿರಣ್ಣ, ಗೋಗರೆದರೂ ಬಿಡದೆ, ಕಳ್ಳತನ ಮಾಡುವಾಗ ಇದು ನಿನಗೆ ತಿಳಿದಿರಲಿಲ್ವಾ ಎಂದು ಹಂಗಿಸಿ ನಿಕೃಷ್ಟವಾಗಿ ನಡೆಸಿ ಕೊಂಡಿದ್ದಾರೆ.

ವಿಪರ್‍ಯಾಸ ಎಂದರೆ ತಾವು ಥಳಿಸುವ, ನಿಂದಿಸುವ ಎಲ್ಲವನ್ನೂ ವಿಡಿಯೋ ಮಾಡಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದೆ. ತಪ್ಪು ಮಾಡಿದ ಯಾರನ್ನೇ ಆಗಲಿ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು. ಆದರೆ ಕೆಲ ದುರುಳರು ತಾವೇ ಕಾನೂನು ಕೈಗೆ ತೆಗೆದುಕೊಂಡು ಮೃಗೀಯ ವರ್ತನೆ ತೋರಿದ್ದಾರೆ. ಈ ಹಿಂದೆಯೂ ಕಳ್ಳತನ ಮಾಡಿದ್ದೆ ಎಂದು ಸಿಟ್ಟಿಗೆದ್ದು ಮಂಜು ಮೇಲೆ ಅನೇಕರು ಮುಗಿ ಬಿದ್ದಿದ್ದಾರೆ.

ಇನ್ನೊಮ್ಮೆ ತಪ್ಪು ಮಾಡಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಕ್ಷಮೆ ಕೇಳಿದರೂ ಬಿಡದೆ ಮನಬಂದಂತೆ ಕೈ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್, ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾವರ ಗ್ರಾಮದ ತೋಟವೊಂದರಲ್ಲಿ ಕಳ್ಳತನ ಮಾಡಿದ ಆರೋಪದಡಿ ಮಂಜು ಎಂಬಾತನನ್ನು ಥಳಿಸಲಾಗಿದೆ.

ನಾಲ್ಕೈದು ಮಂದಿ ಕಾಫಿ ಬೆಳೆಗಾರರು ಸೇರಿ ಈ ಕೃತ್ಯ ಎಸಗಿದ್ದಾರೆ. ನಮ್ಮ ಪೊಲೀಸರು ದಿಢೀರ್ ಕಾರ್ಯಪ್ರವೃತ್ತರಾಗಿ ಬೆಳ್ಳಾವರ ಗ್ರಾಮದ ರಾಘವೇಂದ್ರ ಕೆ.ಪಿ., ಉಮೇಶ, ಮಲ್ಲಿಗನೂರು ಗ್ರಾಮದ ಕೀರ್ತಿ, ದೋಣನಮನೆ ಗ್ರಾಮದ ಶ್ಯಾಮುಯಲ್ ಮತ್ತು ಕಿತ್ತಾವರ ಗ್ರಾಮದ ನವೀನ್ ರಾಜ್ ಎಂಬುವರನ್ನು ಬಂಧಿಸಿದ್ದಾರೆ ಎಂದು ಹೇಳಿದರು. ಹಲ್ಲೆ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರಿದಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು