ಬೇಲೂರು: ನಾನು ರಾಜಕಾರಣ ಮಾಡುವುದಿದ್ದರೆ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಮಾಡುತ್ತೇನೆಯೇ ಹೊರತು ಬೇರೆ ತಾಲ್ಲೂಕಿನ ಬಗ್ಗೆಯಾಗಲಿ ಬೇರೆ ಪಕ್ಷದ ಬಗ್ಗೆಯಾಗಲಿ ಕನಸಿನಲ್ಲಿಯೂ ಯೋಚಿಸುವುದಿಲ್ಲವೆಂದು ಮಾಜಿ ಸಚಿವ ಬಿ.ಶಿವರಾಂ ಸ್ಪಷ್ಟಪಡಿಸಿದ್ದಾರೆ.
ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು ಯಾರೋ ಕಿಡಿಗೇ ಡಿಗಳು ಸಾಮಾಜಿಕ ಜಾಲ ತಾಣದಲ್ಲಿ ಅಪ ಪ್ರಚಾರ ನಡೆಸಿದ್ದು ನಾನು ಅನ್ಯ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲವೆಂದಿರುವ ಅವರು ಅಪಪ್ರಚಾರ ಮಾಡಿರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಈ ಬಗ್ಗೆ ದೂರು ನೀಡುವ ಬಗ್ಗೆ ಚಿಂತನೆ ಇದೆ ಎಂದರು.
ನನಗೆ ನನ್ನ ಪಕ್ಷ ಎಲ್ಲ ರೀತಿಯ ಅಧಿಕಾರ ನೀಡಿದೆ. ನನ್ನನ್ನು ಗುರುತಿಸಿ ಗುರುತರವಾದ ಜವಬ್ದಾರಿ ವಹಿಸಿದೆ. ನಾನೇಕೆ ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ಮಾಡಲಿ ಎಂದ ಅವರು ಅದು ಕನಸಿನಲ್ಲಿಯೂ ಕೂಡ ಸಾಧ್ಯವಿಲ್ಲವೆಂದರು.
ನಾನು ರಾಜಕಾರಣ ಮಾಡುವುದಿದ್ದರೆ ಅದು ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರವೆಂದು ಪುನರುಚ್ಚರಿಸಿದ ಅವರು ರಾಜಕೀಯ ಹೊರತು ಪಡಿಸಿ ಉಳಿಯುತ್ತೇನೆಯೇ ವಿನಃ ಬೇಲೂರು ಕ್ಷೇತ್ರ ಹೊರತುಪಡಿಸಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು.