ಅರಸೀಕೆರೆ: ನನಗೂ ಜೆಡಿಎಸ್ ಮುಖಂಡರ ನಡುವೆ ಭಿನ್ನಾಭಿಪ್ರಾಯ ಬಂದಿದೆ. ಅದು ಎಲ್ಲರಿಗೂ ಗೊತ್ತಿದೆ. ಏಕಾಏಕಿ ಒಂದು ಸಭೆಯಲ್ಲಿ ನಾನು ಗಿಜಿಹಳ್ಳಿ ತೋಟದಲ್ಲಿ ಪರಿಹಾರ ಕೊಡಿಸಲು ಮಲಗಿದ್ದೆ, ಇವನು ನಾಟಕಕ್ಕೆ ಮಲಗಿದ್ದ ಅಂದ್ರೆ, ನಾನ್ಯೇಕೆ ಇರಬೇಕು, ಇವರ ಜೊತೆ, ರಾಜಕೀಯದಲ್ಲಿ ಸ್ವಂತ ಅಣ್ಣ ತಮ್ಮಂದಿರೇ ಯುದ್ದಕ್ಕೆ ನಿಲ್ತಾರೆ, ಸ್ವಂತ ಅಣ್ಣ ತಮ್ಮಂದಿರೇ ಬೇರೆ ಆಗಿ ಹೋಗ್ತಾರೆ. ಇದು ಕೆ.ಎಂ. ಶಿವ ಲಿಂಗೇಗೌಡ ಜೆಡಿಎಸ್ ಮುಖಂಡರ ವಿರುದ್ಧ ಗುಡುಗಿದ ಪರಿ.
ಕ್ಷೇತ್ರದಲ್ಲಿ ಮುಖ್ಯವಾದ ಜಾತ್ರೆಗಳಿವೆ. ಜೆಡಿಎಸ್ ಯಾತ್ರೆಗೆ ಬರಲು ಆಗಲ್ಲ ಅಂದ್ರೆ , ಚಾಕು, ಚೂರಿ ಹಾಕಿ ಹೋದ ಅಂತ ಇವರು ಮಾತನಾಡಿದ್ರೆ ಅವರ ಜೊತೆ ನನಗೇನು ಕೆಲಸವೆಂದು ಜೆಡಿಎಸ್ ನಾಯಕರ ವಿರುದ್ಧ ಕೆ.ಎಂ.ಶಿ ಗುಡುಗಿದರು. ಅದರಿಂದ ಭಿನ್ನಾಭಿಪ್ರಾಯ ಬಂತು, ಭಿನ್ನಾಭಿಪ್ರಾಯ ನಾನೇನು ಮಾಡಿಕೊಂಡಿಲ್ಲ ಅಥವಾ ನಾನೇನು ಮಾರಿಕೊಂಡಿಲ್ಲ, ರಾಜ್ಯಸಭಾ ಚುನಾವಣೆಯಲ್ಲಿ ಐದು ಕೋಟಿ ಕೊಡ್ತಿನಿ ಲೆಹರ್ ಸಿಂಗ್ಗೆ ಓಟು ಹಾಕಿದ್ರೆ ಅಂದ್ರು. ನಾನು ನನ್ನ ಜೀವನದಲ್ಲಿ ಯಾರಿಗೂ ಮಾನ ಮರ್ಯಾದೆ ಮಾರಿಕೊಂಡು ಜೀವನ ಮಾಡಿಲ್ಲವೆಂದು ಟೀಕಿಸಿದ ಶಿವಲಿಂಗೇಗೌಡರು ಇವತ್ತು ರಾಜ್ಯದಲ್ಲಿ ಶಿವಲಿಂಗೇಗೌಡ ಅಂದ್ರೆ ಒಂದು ಹೆಸರಿದೆ , ಭಿನ್ನಾಭಿಪ್ರಾಯ ಬಂತು ಬೇರೆ ಆಗಿ ಬಿಟ್ಟಿದ್ದೀವಿ, ನೀವು ಬೇರೆ ಹೋಗಿದ್ದೀರಿ, ನಿಮ್ಮ ಪಕ್ಷ ಕಟ್ಟಿಕೊಂಡಿದ್ದೀರಿ. ನನಗೆ ನನ್ನ ಕ್ಷೇತ್ರದ ಐದಾರು ಸಾವಿರ ಜನ ಸೇರಿ, ಇಲ್ಲಾ ನೀನು ಈ ಸಾರಿ ಕಾಂಗ್ರೆಸ್ಗೆ ಹೋಗಬೇಕು ಅಂತ ಕೂಗಿದ್ರು. ನಾನು ಜನ ಏನು ಹೇಳಿದ್ರು ಅದರಂತೆ ನಾನು ಕಾಂಗ್ರೆಸ್ಗೆ ಹೋಗು ವಕೆಲಸ ಮಾಡಿದ್ದೇನೆ , ಆದರೆ ಸುಮ್ಮನೆ ಏನೇನೋ ಹೇಳುವುದು ತರವಲ್ಲ, ಆಡಿಯೋ ಮಾಡಿ ಬಿಟ್ಟು ಸಿಂಪಥಿ ಗಿಟ್ಟಿಸುವುದು ಇದೆಲ್ಲಾ ಜನರಿಗೆ ಅರ್ಥವಾಗಲ್ವಾ..? ಎಂದು ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.
ನಿಮ್ಮ ಪಾಡಿಗೆ ನೀವು ಇರಿ, ನಮ್ಮ ಪಾಡಿಗೆ ನಾವು ಇರ್ತಿವಿ , ನಿಮ್ಮದು ನಾನು ಹೇಳಲು ಹೋದರೆ ನೀವು ಇನ್ನೊಂದು ಹೇಳುತ್ತೀರಿ ..! ಏನು, ಏತಕ್ಕೆ, ಏನಾಯ್ತು ನಾನು ಹೇಳ್ತಿನಿ , ನಾನೇನು ಯಾರಿಗೂ ಮೋಸ ಮಾಡಿಲ್ಲ, ಪಕ್ಷ ದ್ರೋಹ ಮಾಡಿಲ್ಲ, ಯಾರಿಗೂ ಕೆಟ್ಟ ಹೆಸರು ತಂದಿಲ್ಲ ಹೊಂದಾಣಿಕೆ ಆಗಲಿಲ್ಲ ಹೋಗಿದ್ದೀನಿ, ಈ ದೇಶದ ಪ್ರಜಾಪ್ರಭುತ್ವದಲ್ಲಿ ಎಂತೆಂತಹವರು ಪಾರ್ಟಿ ಬಿಟ್ಟು ಹೋಗಿದ್ದಾರೆ, ಎಷ್ಟು ಜನ ಪಾರ್ಟಿ ಬಿಟ್ಟು ಹೋಗಿದ್ದಾರೆ ಎಂದು ಪ್ರಶ್ನಿಸಿದ ಶಿವಲಿಂಗೇಗೌಡ ಎ.ಟಿ.ರಾಮಸ್ವಾಮಿ, ಶ್ರೀನಿವಾಸ್ಗೌಡ, ಗುಬ್ಬಿ ವಾಸಣ್ಣ ಯಾರೋ ಯಾವ್ಯಾವ ಪಾರ್ಟಿ ಬಿಟ್ಟು ಹೋಗುತ್ತಿದಾರೆ ಎಂದರು.
ಅಂದು ಹದಿನೇಳು ಜನರ ಜೊತೆ ಹೋಗಿದ್ದಲ್ಲಿ ಅಂದೇ ನನಗೆ ಮಂತ್ರಿ ಪಟ್ಟ ಕೊಡುತ್ತಿದ್ದರು. ನಾನು ಅಂತಹ ಕೆಟ್ಟ ಕೆಲಸ ಮಾಡಲ್ಲ, ನಾನು ಅದಲ್ಲ ನೀವು ಬಿ ಫಾರಂ ಕೊಟ್ಟಿದ್ದು ಐದು ವರ್ಷ, ಏ.೨೩ ರವರೆಗೆ ನಿಮ್ಮ ಋಣ ಇದೆ , ಅಲ್ಲಿಯವರೆಗೂ ನಾನು ರಾಜೀನಾಮೆ ಕೊಡಲ್ಲ. ಆಮೇಲೆ ನಾನು ಕೊಟ್ಟು ಹೋಗ್ತಿನಿ , ನಾನು ರಾಜಕೀಯದ ಸನ್ಯಾಸಿ ಅಲ್ಲಾ, ನಾನು ರಾಜಕೀಯ ಮಾಡಲೇಬೇಕು, ನಾನು ಮಾಡ್ತಿನಿ , ಅದುಕ್ಕೋಸ್ಕರ ಈ ಭಿನ್ನಾಭಿಪ್ರಾಯ ಬೇಡ , ಯಾರು, ಏನು, ಎಂತದ್ದು ಬೇಡ, ಜನ ಓಲೈಸಿಕೊಳ್ಳಿ ಚುನಾವಣಾ ರಣರಂಗದಲ್ಲಿ ಸೋಲಿಸಿ ನಾನೇನು ಬೇಡ ಅನ್ನಲ್ಲ , ಈ ಕ್ಷೇತ್ರದ ಜನ ನನ್ನ ಕೈ ಹಿಡಿದರೆ ನಾನು ಮುಂದುವರಿಯುತ್ತೇನೆ., ಈ ಕ್ಷೇತ್ರದ ಜನ ಮುಂದುವರಿಯಲು ಕೊಡದೆ ಹೋದರೆ ಮನೆಗೆ ಹೋಗ್ತಿನಿ ಎಂದು ತಮ್ಮ ಎಂದಿನ ಶೈಲಿಯಲ್ಲಿಯೇ ಪ್ರತ್ಯುತ್ತರ ನೀಡಿದರು.
ನಾನು ಯಾರಿಗೆ ಮೋಸ ಮಾಡಿದ್ದೀನಿ , ಏನು ನಿಮ್ಮ ಪಾರ್ಟಿಲಿ ಯಾರಿಗೂ ಏನು ಮೋಸ ಮಾಡಿಲ್ವಾ, ಎಲ್ಲಾ ಕಥೆ ನನಗೂ ಗೊತ್ತಿದೆ. ಇಲ್ಲದಿದ್ದರೆ ನಾನು ಕಥೆ ಹೇಳಬೇಕಾಗುತ್ತದೆ ಎಂದು ಕಿಡಿಕಾರಿದರು