ಅರಸೀಕೆರೆ: ನಗರದಲ್ಲಿ ನಿಲ್ಲದ ಕಳ್ಳತನ, ನಗರದ ಮುಖ್ಯರಸ್ತೆಯಲ್ಲೆ ನಡೆದ ಕಳ್ಳತನಕ್ಕೆ ಬೆಚ್ಚಿಬಿದ್ದಿರುವ ಮಾಲೀಕರು ಹಾಗು ಸಾರ್ವಜನಿಕರು, ಎದ್ದು ಕಾಣುತ್ತಿರುವ ಪೊಲೀಸ್ ವೈಫಲ್ಯ, ರಾತ್ರಿಗಸ್ತಿನಲ್ಲಿ ಕಾಣದ ಪೊಲೀಸರು ಈ ಕುರಿತ ವರದಿ ಇಲ್ಲಿದೆ ನೋಡಿ.
ಇತ್ತಿಚೆಗೆ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕದೆ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ರಾತ್ರಿ ನಡೆದ ಸರಳಿ ಕಳ್ಳತನದಿಂದ ವ್ಯಾಪಾರಸ್ಥರು ಹಾಗು ಸಾರ್ವಜನಿ ಕರು ಬೆಚ್ಚಿಬಿದ್ದಿದ್ದು, ಪೊಲೀಸರ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ
ನಗರದ ಬಿಹೆಚ್ ರಸ್ತೆಯಲ್ಲಿರುವ ವಿ ಎಸ್ ಎಸ್ ಮೆಡಿಕಲ್, ಶ್ರೀ ಕೃಷ್ಣ ಸ್ಟೋರ್, ಅಪೋಲೋ ಫಾರ್ಮಸಿ, ನಂಜುಂಡೇಶ್ವರ ಸ್ಟೋರ್ಗೆ ಮಧ್ಯರಾತ್ರಿ ಸುಮಾರು ೨:೪೦ ಸಮಯದಲ್ಲಿ ಅಂಗಡಿಗಳ ಬೀಗಗಳನ್ನು ಒಡೆದು ಒಳನುಗ್ಗಿ ಗಲ್ಲದಲ್ಲಿ ಇದ್ದಂತಹ ಹಣವನ್ನು ದೋಚಿಕೊಂಡು ಹೋಗಿರುವಂತಹ ದೃಶ್ಯಗಳನ್ನು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಎಂದಿನಂತೆ ಬೆಳಿಗ್ಗೆ ಅಂಗಡಿಗಳು ತೆರೆಯಲು ಬಂದ ಸಮಯದಲ್ಲಿ ಅಂಗಡಿಗಳ ಬೀಗ ಒಡೆದಿರುವುದನ್ನು ಕಂಡು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದಾಗ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು.
ಮೆಡಿಕಲ್ ಸ್ಟೋರ್ ಮಾಲೀಕ ವೀರಣ್ಣ ಗೌಡ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಹಾಗೂ ಯಾವಾಗಲೂ ಜನರ ಓಡಾಟ ಇರುತ್ತದೆ ಆದರೂ ಒಂದೇ ರಾತ್ರಿ ೪ ಅಂಗಡಿಗಳ ಕಳ್ಳತನವಾಗಿರುವುದು ತುಂಬಾ ಆತಂಕ ವಾಗಿದೆ ಕೆಲವು ದಿನಗಳಿಂದ ಕೆಲವು ಪ್ರದೇಶಗಳಲ್ಲಿ ಕಳ್ಳತನವಾಗುತ್ತಿರುವ ವರದಿಗಳು ಪ್ರಕಟವಾಗುತ್ತಿದೆ ಆದರೆ ಠಾಣೆ ದೂರು ನೀಡಿದರು ಏನು ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.