ನವಲಗುಂದ: ಇಂದು ನವಲಗುಂದ ನಗರದಲ್ಲಿ ಯಾತ್ರೆ ಕೈಗೊಂಡಿದ್ದು ಈ ಬಾರಿ 130 ಸೀಟ್ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಮುಂಬರುವ ಚುನಾವಣೆ ವಿಚಾರವಾಗಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರವು ಬಡವರನ್ನ ಬ್ಯಾಂಕ್ನಲ್ಲಿ ಸಾಲಗಾರನ್ನಾಗಿ ಮಾಡಿತ್ತು. ಪ್ರಧಾನಿಯವರ ಜನಧನ ಯೋಜನೆ 48 ಕೋಟಿ ಜನರಿಗೆ ತಲುಪಿದೆ. ಹಾಗೆ ಜಲ ಜೀವನ ಯೋಜನೆಯಿಂದ ಉತ್ತಮ ಕುಡಿಯವ ನೀರು, ರೈತರಿಗೆ, ವಿದ್ಯಾರ್ಥಿಗಳಿಗೆ, ಅಲ್ಪ ಸಂಖ್ಯಾತರ ಹೆಣ್ಮಮಕ್ಕಳಿಗೆ ಶಿಕ್ಷಣ ಸಲುವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ವಿಶೇಷ ಅನುದಾನ ನೀಡಿದ್ದಾರೆ ಅಲ್ಲದೇ sc/st ಜನತೆಗೆ ಮೀಸಲಾತಿ ನೀಡಿದ್ದಾರೆ. ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದಾರೆ ಹೀಗೆ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಸಿ.ಸಿ ಪಾಟೀಲ್, ಗೋವಿಂದ ಕಾರಜೋಳ, ಶಂಕರ ಪಾಟೀಲ ಮುನೇನಕೊಪ್ಪ, ಬಸವರಾಜ ಕುಂದಗೋಳಮಠ, ಮಲ್ಲಿಕಾರ್ಜುನ ಬಾಳಿಕಾಯಿ, ಅಣ್ಣಪ್ಪ ಬಾಗಿ ಇದ್ದರು.