ಹೊಳೆನರಸೀಪುರ: ಜಿಲ್ಲೆಯ ಲ್ಲಿ ೭ ಕ್ಕೆ ೭ ಸ್ಥಾನಗಳು ಜೆಡಿಎಸ್ಗೆ ಲಭ್ಯವಾಗಲಿದೆ. ಇಲ್ಲಿನ ಜನತೆಗೆ ನಾನು ಮನವಿ ಮಾಡುವ ಪ್ರಮೇಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪ್ರಣಾಳಿಕೆ ಪರಿಕಲ್ಪನೆಯಡಿ ರಾಜ್ಯದಾದ್ಯಂತ ನಡೆಸಿರುವ ಪಂಚತಂತ್ರ ಯಾತ್ರೆ ಪಟ್ಟಣಕ್ಕೆ ಭೇಟಿ ಕೊಟ್ಟ ಸಂದರ್ಭ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಒಳಮೀಸಲಾತಿ ವಿಚಾರದಲ್ಲಿ ರಾಜ್ಯಕೀಯ ಬೇಳೆ ಬೇಯಿಸಿ ಕೊಳ್ಳುವ ಸಲುವಾಗಿ ಸಮಾಜದ ಜತೆ ಎರಡೂ ರಾಷ್ಟ್ರೀಯ ಪಕ್ಷಗಳು ಚಲ್ಲಾಟವಾಡುತ್ತಿವೆ. ಕಾನೂನು ಬದ್ಧವಾಗಿ ತಾಂತ್ರಿಕನೀತಿ ಅನುಸರಿಸಿ ಆಯಾ ಸಮಾಜಗಳಿಗೆ ಮೀಸಲಾತಿ, ಒಳಮೀಸಲಾತಿ ಕೊಡಬೇಕಿದೆ. ಆಯಾ ಕುಟುಂಬ ಗಳ ಆರ್ಥಿಕ ವರಮಾನ, ಸ್ಥಿತಿ, ಗತಿ ಅವಲೋಕಿಸಬೇಕಿದೆ. ಮಾದ ಗದಂಡೋರ ಒಳಮೀಸಲಾತಿ ವಿಚಾರ, ಪಂಚಮಸಾಲಿಗಳು ೨ಎ ಮೀಸಲಾತಿ ಕೋರಿ ಹೋರಾಟ ನಡೆಸಿದೆ . ಕೆಲವರು ಎಸ್ಸಿ ಮೀಸಲುಗೊಳಿಸಿ ಎನ್ನುವುದು ಇರಬಹುದು. ಆ ದೇವರ ದೆಯೆಯಿಂದ ರಾಜ್ಯದ ಜನತೆ ಈ ದೇವೇಗೌಡರ ಮಗನ ಕೈಗೆ ಸಂಪೂರ್ಣ ೫ ವರ್ಷ ಅವಧಿಗೆ ಅಧಿಕಾರ ಕೊಟ್ಟರೆ . ಈ ಎಲ್ಲ ವಿಚಾರಕ್ಕೂ ತಾಂತ್ರಿಕ ನೀತಿ ಅನುಸರಿಸಿ ಪರಿಹರಿಸುತ್ತೇನೆ ಎಂದು ಬರವಸೆ ನೀಡಿದರು.
ನನ್ನ ಮಕ್ಕಳು ಈ ರಾಜ್ಯದ ಜನತೆಯ ಬದುಕನ್ನು ಕಟ್ಟಿ ತೋರಿಸಿದ್ದಾರೆ ಎಂದು ನೋಡಲು ದೇವೇಗೌಡರು ಇನ್ನೂ ಹೆಚ್ಚು ಕಾಲ ಬದುಕಿರಬೇಕು. ನನಗೆ ಸಿಕ್ಕ ಅಲ್ಪಅವಧಿಯ ಅಧಿಕಾರದಲ್ಲಿ ರಾಜ್ಯದ ಸಂಪೂರ್ಣ ಕೆಲಸ ಮಾಡಲಾಗಿಲ್ಲ ಎಂಬ ಕೊರಗು ದೇವೇಗೌಡರಲ್ಲೂ ಇದೆ. ಆದರೆ ಅವರ ಮಕ್ಕಳಾದ ನಾವು ರಾಜ್ಯದ ಜನತೆಯನ್ನು ಅಭ್ಯುದಯಗೊಳಿಸುವುದನ್ನು ಅವರು ನೋಡಬೇ ಕೆಂದು ನಾನು ಮಾತುಕೊಟ್ಟು ಬಂದಿದ್ದೇನೆ ಎಂದರು.
ನನ್ನ ಸಹೋದರ ಶಾಸಕ ರೇವಣ್ಣ ಸ್ವಲ್ಪ ಒರಟು ಸ್ವಭಾವ. ಆದರೂ ನಿಮ್ಮ ಹೃದಯದಲ್ಲಿ ಆತ ನೆಲೆಸಿದ್ದಾನೆ ಎಂಬುದನ್ನು ನಾನು ಬಲ್ಲೆ. ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ರನ್ನು ಆ ಕ್ಷೇತ್ರದ ಜನತೆ ಒಪ್ಪಿದ್ದಾರೆ. ಅರಕಲಗೂಡು ಕ್ಷೇತ್ರ ದಿಂದ ಮಾಜಿ ಸಚಿವ ಎ.ಮಂಜು ಈ ಬಾರಿ ನಮ್ಮನ್ನು ಬಂಬೆಲಿಸಿ ನಿಂತಿದ್ದಾರೆ. ಅರಸೀಕೆರೆ ಜನತೆ ಲಿಂಗಾಯಿತ, ಕುರುಬ ಸಮೂದಾಯಗಳೆಲ್ಲವೂ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಪಣ ತೊಟ್ಟಿದ್ದಾರೆ ಎಂದರು. ಆದರೆ ಹಾಸನ ಕ್ಷೇತ್ರದ ವಿಚಾರ ಕುರಿತು ಚಕಾರ ಎತ್ತಲಿಲ್ಲ.