News Karnataka Kannada
Thursday, May 09 2024
ಹಾಸನ

ಹಾಸನ: ಡಿಸಿ ಕಛೇರಿ ಮುಂದೆ ನಿರಂತರ ಧರಣಿ ಆರಂಭಿಸಿದ ಯೋಧ ಯತೀಶ್

Hassan: Yatheesh begins dharna in front of DC's office
Photo Credit : News Kannada

ಹಾಸನ: ನನ್ನ ಸಹೋದರ ಯಶವಂತ್ ಮತ್ತು ಕುಟುಂಬದವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ಕೊಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಯೋಧ ತಿರುಮನಹಳ್ಳಿ ಗ್ರಾಮದ ಯತೀಶ್ ಕುಟುಂಬದವರ ಜೊತೆ ನಿರಂತರ ಧರಣಿ ಆರಂಭಿಸಿದ್ದಾರೆ.

ಬೇಲೂರು ತಾಲ್ಲೂಕಿನ ತಿರುಮನಹಳ್ಳಿ ಗ್ರಾಮದಲ್ಲಿ ರಸ್ತೆ ವಿಚಾರವಾಗಿ ನನ್ನ ಸಹೋದರ ಯಶ್ವಂತ್ ಅವರೊಂದಿಗೆ ಚಂದನ್ ಹಾಗೂ ಕುಟುಂಬದವರು ಗಲಾಟಿ ಮಾಡಿದ್ದು ಈ ವೇಳೆ ಯಶ್ವಂತ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಯಶ್ವಂತ್ ಸಾವಿಗೆ ಕಾರಣರಾಗಿರುವ ಅಶ್ವಥ್, ಜಯಚಂದ್ರೇಗೌಡ ,ನಿತಿನ್ ಕುಮಾರ್ ಸೇರಿದಂತೆ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು ಇದುವರೆಗೂ ಪೊಲೀಸರು ಬಂಧಿಸಿಲ್ಲ ಪ್ರತ್ಯಕ್ಷ ಸಾಕ್ಷಿ ಮತ್ತು ಕೊಲೆ ಪ್ರಕರಣ ಸಂಬಂಧಿಸಿದಂತೆ ವಿಡಿಯೋ ಮತ್ತು ಫೋಟೋ ಸೇರಿದಂತೆ ಅಗತ್ಯ ದಾಖಲೆ ಒದಗಿಸಿದ್ದರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ಪೊಲೀಸ್ ಇಲಾಖೆ ಆರೋಪಿಗಳೊಂದಿಗೆ ಶಾಮೀಲಾಗಿರುವ ಅನುಮಾನ ವಿದೆ ಇವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಇತ್ತೀಚಿಗೆ ಕಬ್ಬಿನಹಳ್ಳಿ ಯಶೋಧರ ಎಂಬುವರು ಮನೆಗೆ ಬಂದು ಪ್ರಕರಣ ಹಿಂಪಡೆಯುವಂತೆ ಪದೇಪದೇ ಬೆದರಿಕೆ ಸಹ ಹಾಕುತ್ತಿದ್ದಾರೆ ಎಂದು ತಿಳಿಸಿದ ಯತೀಶ್ ಅವರು ಕುಟುಂಬದ ರಕ್ಷಣೆಗೆ ಒತ್ತಾಯಿಸಿದ್ದಾರೆ .

ನಾನು ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದು ಒಂದು ತಿಂಗಳ ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿದ್ದೇನೆ. ಕರ್ತವ್ಯದಲ್ಲಿ ಇರುವಾಗ ಕುಟುಂಬಕ್ಕೆ ಏನಾದರೂ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು ಇತ್ತೀಚೆಗೆ ನನ್ನ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ತಮ್ಮ ಅಳಲು ತೋಡಿಕೊಂಡರು.

ಪೊಲೀಸರು ಕೂಡಲೇ ಕೊಲೆಗಾರರನ್ನು ಬಂಧಿಸಬೇಕು ಇಲ್ಲವಾದರೆ ಡಿಸಿ ಕಚೇರಿ ಎದುರು ನಿರಂತರವಾಗಿ ಧರಣಿ ಮಾಡಲಾಗುವುದು ಎಂದು ಹೇಳಿದರು. ಇದೆ ವೇಳೆ ಯೋಧನ ತಾಯಿ, ಅಜ್ಜಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು