ಹಾಸನ: ನಿರ್ಮಿತ ಕೇಂದ್ರ ದಲ್ಲಿ ಸರ್ಕಾರಿ ಕೆಲಸ ಕೊಡಿಸು ವುದಾಗಿ ಸ್ನೇಹಿತರಿಂದಲೇ ಹಣ ವಸೂಲಿ ಮಾಡಿ ಕೊನೆಗೆ ಸಿಕ್ಕಿ ಬಿದ್ದು, ಪೊಲೀಸ್ ಠಾಣೆ ಮೆಟ್ಟಿಲು ಏರಿದ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಇತ ಸಯ್ಯಾದ್ ಸೈಪುಲ್ಲ. ನೋಡುವುದಕ್ಕೆ ಶ್ರೀಮಂತನಂತೆ ಪೋಸ್ ಕೊಡ್ತಾನೆ. ಆದ್ರೆ ಇತ ವಂಚಕ ಎಂಬುದು ಯಾರಿಗೂ ಸಲ್ಪವು ಅನುಮಾನ ಬಾರದ ರೀತಿ ನಡೆದುಕೊಳ್ಳುತ್ತಾನೆ. ಇತನ ಮೂಲ ಸ್ಥಳ ಬಾಳೆಹೊನ್ನೂರು ಆದ್ರೂ ಇಲ್ಲಿಗೆ ಬಂದು ಡಿಪ್ಲೋ ಮಾ ಶಿಕ್ಷಣ ಪಡೆಯುತ್ತಾನೆ. ಈವೇಳೆ ಅನೇಕರ ಸ್ನೇಹ ಸಂಪಾ ದನೆ ಮಾಡಿರುತ್ತಾನೆ. ಶಿಕ್ಷಣ ಮುಗಿದ ಬಳಿಕ ಸ್ನೇಹಿತರೆಲ್ಲಾ ಅವರವರ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಈ ವೇಳೆ ಸಯ್ಯಾದ್ ಸೈಪುಲ್ಲ ಎಂಬುವನು ಹಣ ಮಾಡಲು ಒಂದು ಪ್ಲಾನ್ ಮಾಡಿ ಈಗ ಕಂಬಿ ಎಣಿಸುತ್ತಿದ್ದಾನೆ
ಸರ್ಕಾರಿ ಕೆಲಸ ಕೊಡುವು ದಾಗಿ ತನ್ನ ಜೊತೆ ಇದ್ದ ಸ್ನೇಹಿತ ರಿಗೆ ಕರೆ ಮಾಡಿ ಕೆಲಸ ಕೊಡಿ ಸುತ್ತೇನೆ ಪರೀಕ್ಷೆ ಫೀಸ್ ಕಟ್ಟಿದರೆ ಸಾಕು ಎಂದು ಆಸೆ ಹುಟ್ಟಿಸಿ, ೧ ಲಕ್ಷ, ೨ ಲಕ್ಷ, ೫೦ ಸಾವಿರ ಈಗೆ ಲಕ್ಷಾಂತರ ರೂಗಳನ್ನು ದೋಚಿ ಕೊಂಡು ಇನ್ನೆನು ಎಸ್ಕೆಪ್ ಆಗ ಬೇಕು ಎನ್ನುವಷ್ಟರಲ್ಲಿ ಸ್ನೇಹಿತರಿಗೆ ಅನುಮಾನ ಬಂದು ತಗ್ಲಾಕೊಂಡಿದ್ದಾನೆ.
ಬಾಕಿ ಹಣ ಕೊಡುವುದಾಗಿ ಹೇಳಿ ಸಯ್ಯಾದ್ ಸೈಪುಲ್ಲನನ್ನು ಒಂದು ಜಾಗಕ್ಕೆ ಕರೆಯಿಸಿ ಕೊಂ ಡು ಕಾರಿನಲ್ಲಿ ಕರೆತಂದು ನಗರದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರ ನಿಷ್ಪಕ್ಷಪಾತ ತನಿಖೆ ಯಿಂದ ಸತ್ಯಾಂಶ ಹೊರಬರ ಲಿದೆ. ಮೋಸ ಹೋದವರು ಮಾಧ್ಯಮದೊಂದಿಗೆ ಮಾತ ನಾಡಿ, ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ. ನಿರ್ಮಿತ ಕೇಂದ್ರ ದಲ್ಲಿ ಕೆಲಸ ಖಾಲಿ ಇದೆ. ಪರೀಕ್ಷೆ ಶುಲ್ಕ ಕೊಟ್ಟರೇ ಸಾಕು ಉಳಿದ ಹಣ ನಾನೆ ಹಾಕುವುದಾಗಿ ನಂಬಿಸಿದ್ದ. ನಾವು ಕೊಟ್ಟ ಹಣಕ್ಕೆ ಚೆಕ್ ಸಹ ನೀಡಿದ್ದಾನೆ ಎಂದರು.
ಸಯ್ಯಾದ್ ಸೈಪುಲ್ಲನಿಂದ ಹಣ ಕಳೆದುಕೊಂಡ ಸಾಗರ್, ಪ್ರಜ್ವಲ್, ರಾಜಶೇಖರ್, ಮಧು, ಸಂಜಯ್,ನಿತಿನ್, ಕರಣ್ ತಮ್ಮ ಅಳಲು ಬಳಿ ತೋಡಿ ಕೊಂಡರು.