ಹಾಸನ: ರಾಜ್ಯ ಬಿಜೆಪಿ ಸರ್ಕಾರ ಈ ಬಾರಿ ಮಂಡಿಸಿದ ಬಜೆಟ್ “ಜನರ ಕಿವಿಗೆ ಹೂವು ಇಟ್ಟು ಮೂಗಿ ಗೆ ತುಪ್ಪ ಸವರಿದ” ರೀತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ದೇವ ರಾಜೆ ಗೌಡ ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು ಇತ್ತೀಚೆಗೆ ಬಜೆಟ್ ಮಂ ಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಿಸುಮಾರು ೩.೦೯ ಲಕ್ಷ ಕೋಟಿ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಆದರೆ ಬಜೆಟ್ನಲ್ಲಿ ಹಾಸನ ಜಿಲ್ಲೆಗೆ ವಿಶೇಷ ಅನುದಾನ ವನ್ನು ಮೀಸಲಿಡದೆ ಮತ್ತೊಮ್ಮೆ ಜಿಲ್ಲೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಏಳು ಶಾಸಕರ ಪೈಕಿ ೬ ಮಂದಿ ಜೆಡಿಎಸ್ ಶಾಸಕರಿದ್ದು ತಮ್ಮ ಪ್ರಭಾವ ಬೀರಿ ಅನುದಾನ ತರಲು ವಿಫಲರಾಗಿದ್ದಾರೆ ಹಾಗೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ ಅವರು ಮುಖ್ಯಮಂತ್ರಿ ಅವರ ಮನವೊಲಿಸಿ, ವಿಶೇಷ ಅನುದಾನ ತರುವಲ್ಲಿಯೂ ವಿಫಲರಾಗಿದ್ದಾರೆ ಎಂದು ದೂರಿದರು.
ಒಟ್ಟಾರೆ ಅಯವ್ಯಯವನ್ನು ಪರಮರ್ಶಿಸಿದರೆ ಹಾಸನ ಜಿಲ್ಲೆಗೆ ಪ್ರಮುಖವಾಗಿ ಬೇಕಾದ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿದೆ ಎಂದು ಟೀಕಿಸಿದ ಅವರು ಸಕಲೇಶ ಪುರ ಭಾಗದ ಪ್ರತಿನಿತ್ಯ ಜನರ ಮುಖ ರೋಧನಿಯಾದ ಆನೆ ಮಾನವ ಸಂಘರ್ಷ ಕೊನೆಗಾಣಿಸುವಲ್ಲಿ ವಿಫಲರಾಗಿದ್ದಾರೆ. ಕೇವಲ ಆನೆಗಳಿಗೆ ತಡೆಗೋಡೆ ನಿರ್ಮಾಣದಿಂದ ಸಂಘರ್ಷವನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಮುಖವಾದ ವಿವಿಧ ಐತಿಹಾಸಿಕ ಪ್ರವಾಸಿ ತಾಣ ಗಳನ್ನು ಹೊಂದಿರುವ ಹಾಸನದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಯಾವುದೇ ಮಾತುಗಳನ್ನು ಹಾಡಿಲ್ಲ,, ಜಿಲ್ಲೆಗೆ ಹೊಸ ಕೈಗಾರಿಕೆ ಸ್ಥಾಪನೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಯಾವುದೇ ಕೆಲಸವನ್ನು ಸರ್ಕಾರ ಪ್ರಸ್ತಾಪಿಸಿಲ್ಲ ಎಂದು ಆರೋಪಿಸಿದರು.
ಪ್ರಮುಖ ಬೆಳೆಯಾದ ಕಾಫಿ ಮತ್ತು ಏಲಕ್ಕಿ ಬೆಳೆಗೆ ಬೆಂಬಲ ಬೆಲೆ ನೀಡಲು ಬಜೆಟ್ನಲ್ಲಿ ಹಣ ನಿಗದಿ ಮಾಡದೇ ಇರುವುದು ಜಿಲ್ಲೆಗೆ ದ್ರೋಹವಾಗಿದೆ ಎಂದು ದೂರಿದರು.
ಅಮ್ಜದ್ ಖಾನ್, ಶಿವಕುಮಾರ್, ಅಬ್ದುಲ್ ಸಮ್ಮದ್, ದೇವಪ್ಪ, ಅಶೋಕ್ ಇದ್ದರು.