News Karnataka Kannada
Sunday, May 05 2024
ಹಾಸನ

ಹಾಸನ:  ಸಮಾಜದ ಒಳಿತಿಗಾಗಿ ಗ್ಲೋಬಲ್ ಚೇಂಬರ್ ಆಫ್ ಕನ್ಸ್ಯೂಮರ್ ರೈಟ್ಸ್ ಸೇವೆ ಮಾಡಲಿ

Hasa
Photo Credit : By Author

ಹಾಸನ: ಅನೇಕ ಸಾಮಾನ್ಯ ಜನರಿಗೆ ಕಾನೂನು ಮತ್ತು ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತವರಿಗೆ ದಾರಿದೀಪವಾಗಿ ಗ್ಲೋಬಲ್ ಚೇಂಬರ್ ಆಫ್ ಕನ್ಸ್ಯೂಮರ್ ರೈಟ್ಸ್ ಸಂಸ್ಥೆ ಸೇವೆ ಮಾಡಲಿ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಕಿವಿಮಾತು ಹೇಳಿದರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ಖಾಸಗೀ ಹೋಟೆಲೊಂದರ ಸಭಾಂಗಣದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಭಾರತದಲ್ಲೆ ಮೊಟ್ಟ ಮೊದಲ ಬಾರಿಗೆ ಹಾಸನದಲ್ಲಿ ಲೋಕರ್ಪಣೆ ಆಗುತ್ತಿರುವ ಗ್ಲೋಬಲ್ ಚೇಂಬರ್ ಆಫ್ ಕನ್ಸ್ಯೂಮರ್ ಸಂಸ್ಥೆಯ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಮನುಷ್ಯನು ಕೆಲ ಕಲ್ಪನೆಯಿಂದ ಹೊರಬರಬೇಕೆಂದ್ರೆ ಮೊದಲನೆಯದಾಗಿ ಈ ದೇಶದ ಕಾನೂನನ್ನು ಅರ್ಥಮಾಡಿಕೊಳ್ಳಬೇಕು. ಇರುವ ಹಕ್ಕುಗಳನ್ನು ವಿಸ್ತಾರವಾಗಿ ತಿಳಿದುಕೊಂಡು ನೆಮ್ಮದಿ ಜೀವನ ಸಾಗಿಸಬೇಕು. ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ಇತರ ಪರಿಣಿತರಿಗೆ ತಿಳಿದಿರುತ್ತದೆ. ಅದು ಸಾಮಾನ್ಯ ಜನರಿಗೂ ಕೂಡ ಅರಿವು ಬರಬೇಕೆಂದರೇ ಇಂತಹ ಸಂಸ್ಥೆಗಳು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು. ಸಮಾಜದಲ್ಲಿ ಸಂಭವಿಸುವ ಅನೇಕ ಸಮಸ್ಯೆಗಳ ಬಗ್ಗೆ ಉತ್ತರ ಕಂಡುಕೊಳ್ಳಬೇಕು. ಇದರಲ್ಲಿರುವ ಎಲ್ಲಾ ಸದಸ್ಯರು ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಸಮಾಜದ ಒಳಿತಿಗಾಗಿ ಮತ್ತು ಒಂದು ಬದಾಲವಣೆ ತರುವ ನಿಟ್ಟಿನಲ್ಲಿ ಈ ಗ್ಲೋಬಲ್ ಚೇಂಬರ್ ಆಫ್ ಕನ್ಸೂಮರ್ ಸಂಸ್ಥೆಯು ಪ್ರಜ್ವಲಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ಲೋಬಲ್ ಚೇಂಬರ್ ಆಫ್ ಕನ್ಸ್ಯೂಮರ್ ಸಂಸ್ಥೆಯ ಫೌಂಡರ್ ಛೇರ್‍ಮನ್ ಜಾರ್ಜಿ ಕುಚ್ಚಿ ಪುರಕಲ್, ನೂತನ ಜಿಲ್ಲಾಧ್ಯಕ್ಷರಾದ ನಂದೀಶ್ ಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್. ಮಂಜುನಾಥ್, ಮಾಜಿ ಸೈನಿಕ ಕುಶಾಲಪ್ಪ, ಉಪಾಧ್ಯಕ್ಷೆ ರೇಷ್ಮಾ, ಮಾಜಿ ಸೈನಿಕರ ಪತ್ನಿ ಅಂಬಿಕಾ, ಹೆತ್ತೂರು ಭಾಗದಿಂದ ಕಮಲಾಕ್ಷಿ, ಜೈಕುಮಾರ್, ರುದ್ರೇಶ್ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು