News Karnataka Kannada
Sunday, April 28 2024
ಹಾಸನ

ಹಾಸನದಲ್ಲಿರುವ ಲೂಟಿಕೋರರನ್ನ ಪೊರಕೆಯಿಂದ ಗುಡಿಸಿ- ಅಗಿಲೆ ಯೋಗೇಶ್

Sweep looters in Hassan with brooms: Agile Yogesh
Photo Credit : News Kannada

ಹಾಸನ: ಹಾಸನದಲ್ಲಿರುವ ಲೂಟಿಕೋರರನ್ನ ಪೊರಕೆ ತೆಗೆದುಕೊಂಡು ಕೆಂಚಟ್ಟಳ್ಳಿಯಿಂದ ಹೊರಗೆ ಊರಾಚೆಗೆ ಗುಡಿಸಿಕೊಂಡು ಹೋಗಿ ಆಚೆಗೆಸೆಯಬೇಕೆಂದು ಪರೋಕ್ಷವಾಗಿ ಶಾಸಕ ಪ್ರೀತಂ ಗೌಡ ವಿರುದ್ಧ ಆಪ್ ಜಿಲ್ಲಾ ಮುಖಂಡ ಅಗಿಲೆ ಯೋಗೇಶ್ ವ್ಯಂಗ್ಯವಾಡಿದರು.

ಆಮ್ ಆದ್ಮ ಪಕ್ಷದ ಜಿಲ್ಲೆ ಹಾಗೂ ವಿವಿಧ ಘಟಕಗಳಿಗೆ ನೂತನವಾಗಿ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವವರ ಪದಗ್ರಹಣ ಕಾರ್ಯಕ್ರಮದಲ್ಲಿ ಶನಿವಾರ ನಗರದ ಖಾಸಗಿ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ವತಿಯಿಂದ ಆಯ್ಕೆ ಪತ್ರ ವಿತರಣೆ ಮಾಡಿ, ಶಾಲು ಹೊದಿಸಿ ಅಭಿನಂದಿಸಲಾಯಿತು.

ಈ ವೇಳೆ ಮಾತನಾಡಿದ ಆಪ್ ರಾಜ್ಯ ಉಪಾಧ್ಯಕ್ಷ ಉಮಾಶಂಕರ್, ದೇಶಾದ್ಯಂತ ನಾವು ಕಟ್ಟುವ ತೆರಿಗೆ ಹಣ ದುರ್ಬಳಕೆಯಾಗುತ್ತಿದೆ. ಜನ ಸಾಮಾನ್ಯರ ತೆರಿಗೆ ಹಣದಿಂದ ರಾಜಕಾರಣಿಗಳು ದೊಡ್ಡವರಾಗುತ್ತಿದ್ದಾರೆ ಎಂದು ಕಿಡಿ ಕಾರಿದರು. ಜನರ ಹಣ ಜನಪರ ಕಾರ್ಯಗಳಿಗೆ ಬಳಕೆ ಆಗಬೇಕು. ಎಲ್ಲೆಡೆ ಭ್ರಷ್ಟಾಚಾರ ನಿಲ್ಲಬೇಕು. ಇದಕ್ಕಾಗಿ ಆಪ್ ಪಕ್ಷ ಹೋರಾಟ ಮಾಡುತ್ತಿದ್ದು, ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಮುಖಂಡ ಅಗಿಲೆ ಯೋಗೇಶ್ ಮಾತನಾಡಿ, ಆಳುವ ಸರ್ಕಾರಗಳ ಎಲ್ಲಾ ರೀತಿಯ ಯೋಜನೆಗಳ ಸವಲತ್ತು ದೇಶದ ಎಲ್ಲಾ ಜನರಿಗೆ ತಲುಪಬೇಕು ಎಂಬುದು ಸಂವಿಧಾನದಲ್ಲೇ ಇದೆ. ಆದರೆ ಕಾನೂನು ಬದ್ಧವಾಗಿ ಜನರಿಗೆ ಏನೆಲ್ಲಾ ಸಿಗಬೇಕಿತ್ತೋ ಅದು ಸಿಗುತ್ತಿಲ್ಲ. ಬಡವರು ಬಡವರಾಗಿಯೇ ಇದ್ದಾರೆ, ಉಳ್ಳವರು ದಿನದಿಂದ ದಿನಕ್ಕೆ ಶ್ರೀಮಂತರಾಗುತ್ತಿದ್ದಾರೆ. ಈ ಅಂತರ, ಅನ್ಯಾಯ ನಿಲ್ಲಬೇಕಾದರೆ ಆಪ್ ಅಧಿಕಾರಕ್ಕೆ ಬರಬೇಕು. ಇದರಿಂದ ಖಂಡಿತಾ ಭ್ರಷ್ಟಾಚಾರ ನಿರ್ಮೂಲನೆಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ತೇಜೂರು ಆನಂದ್, ಮುಖಂಡರಾದ ದಸ್ತಗೀರ್, ಸುಂದರೇಶ್, ಅಕಲ್ ಜಾವೇದ್ ಇತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು