News Karnataka Kannada
Monday, April 29 2024
ಹಾಸನ

ಹಾಸನ: ಆಮ್ ಆದ್ಮಿ ಪಕ್ಷದ ಪೊರಕೆಯೆ ಪರಿಹಾರ ಎಂಬ ಅಭಿಯಾನ

Hassan: The Aam Aadmi Party's broom is the solution to the broom
Photo Credit : By Author

ಹಾಸನ: ಆಮ್ ಆದ್ಮಿ ಪಕ್ಷದ ಪೊರಕೆಯೆ ಪರಿಹಾರ ಎಂಬ ಅಭಿಯಾನದ ಅಡಿಯಲ್ಲಿ ಇಂದು ನಗರದ ಕುವೆಂಪು ನಗರ, ಶಂಕರ್ ಮಠ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಪ್ರಚಾರ ನಡೆಯಿತು.

ನಗರದ ವಿವಿಧ ಬಡಾವಣೆಯ ಮತದಾರರಿಗೆ ಪೊರಕೆ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ದುರಾಡಳಿತ ನಡೆಸುತ್ತಿರುವ ಜೆಸಿಬಿ ಪಕ್ಷಗಳನ್ನು ಗುಡಿಸಲು ಪೊರಕೆಯಿಂದ ಮಾತ್ರ ಸಾಧ್ಯ, ಆದುದರಿಂದ ಪೊರಕೆ ಉಪಯೋಗಿಸಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ಗುಡಿಸಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ರಾಜ್ಯ ರಾಜಕೀಯದಲ್ಲಿ ಕಮಲ ಬಾಡಿದೆ, ತೆನೆ ಉದುರಿದೆ, ಕೈ ಕೊಳೆತಿದೆ ಎನ್ನುವ ಮೂಲಕ ಮೂರು ಮೂರು ಪಕ್ಷಗಳ ಬಗ್ಗೆ ವ್ಯಂಗ್ಯ ವಾಡಿದ ಅವರು ಪೊರಕೆಯಿಂದ ಮಾತ್ರ ದೇಶದ ಬ್ರಷ್ಟಾಚಾರದ ಗುಡಿಸಲು ಸಾಧ್ಯ ಎಂಬುದನ್ನು ಜನರಲ್ಲಿ ಅರಿವು ಮೂಡಿಸಿ ಪೊರಕೆ ಗುರುತಿನ ಆಮ್ ಆದ್ಮಿ ಪಕ್ಷ ಬೆಂಬಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಶಂಕ ಮಂಜು, ಅಬೀಬ್, ಸುಂದರೇಶ್, ರೆಹಮತ್, ರಂಗಸ್ವಾಮಿ, ನಜೀರ್, ಜ್ಯೋತಿ ಇತರರು ಇದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು