ಜಿ. ಕೆ ಎಂಟರ್ಟೈನ್ಮೆಂಟ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿರುವ ಎನ್ ಆರ್ ಐ ನಿರ್ಮಾಪಕರಾದ (ಇಂಡಿಯಾ ವರ್ಸಸ್ ಇಂಗ್ಲೆಂಡ್ ) ಖ್ಯಾತಿಯ ಗೋಪಾಲ್ ಕುಲಕರ್ಣಿ ನಿರ್ಮಾಣದ ಹಾಗೂ ಸತ್ಯರತ್ನಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ” ಕಥಾಲೇಖನ” ಚಿತ್ರವು ಅಕ್ಟೋಬರ್ 21ರಂದು ರಾಜ್ಯಾದ್ಯಂತ ಹಾಗೂ ವಿಶ್ವದ ಹಲವು ಕಡೆ ತೆರೆ ಕಾಣಲಿದೆ.
ಲವ್, ರೋಮ್ಯಾನ್ಸ್, ಸಸ್ಪೆನ್ಸ್, ಕಾಮಿಡಿ, ಹಾಗೂ ಸೆಂಟಿಮೆಂಟಲ್ ನಿಂದ ಕೂಡಿದ ಈ ಚಲನಚಿತ್ರದ ಹಾಡುಗಳು ಬಹಳ ಜನಪ್ರಿಯವಾಗಿದೆ.
ಕಾಲ್ಪನಿಕ ಆಧಾರಿತವಾಗಿರುವ ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಅರ್ಫತ್, ಕಾವ್ಯ ಭಗವಂತ್, ಗೋಪಾಲ್ ಕುಲಕರ್ಣಿ.ಚಂದ್ರಪ್ರಭಾ, ನಾಗೇಂದ್ರ ಅರಸ್, ಸ್ವಪ್ನ ರಾಜ್, ಪಲ್ಟಿ ಗೋವಿಂದ, ಜಗಪ್ಪ ಮಂಜುಪಾವಗಡ ಮುಖ್ಯ ಭೂಮಿಕೆಯಲ್ಲಿದ್ದು ಇನ್ನೂ ಹಲವು ಹೊಸ ಪ್ರತಿಭೆಗಳು ಕೂಡ ನಟಿಸಿದ್ದಾರೆ.
ಚಿತ್ರಕ್ಕೆ ಕರ್ಣಂ ಶ್ರೀ ರಾಘವೇಂದ್ರರ ಸಂಗೀತ, ರಂಗಸ್ವಾಮಿ.ಎಸ್. ರವರ ಕ್ಯಾಮೆರಾ ಕೈ ಚಳಕವಿದ್ದು ,ಶ್ರೀವರ್ಕಲರ ಸಂಕಲನ, ರಾಜು ರವರ ನೃತ್ಯ ಸಂಯೋಜನೆ ಇದೆ, ಸತ್ಯರತ್ನಮ್ ಹಾಗೂ ಹರ್ಷರ್ಧನ್ ನಿಟ್ಟೂರು ರವರ ಸಾಹಿತ್ಯ ಚಿತ್ರಕ್ಕಿದೆ, ಹೆಸರಾಂತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಗೌತಮ್ ಭಾರದ್ವಾಜ್, ಅನುರಾಧ ಭಟ್ ರವರ ಕಂಠ ಸಿರಿಯಲ್ಲಿ ಹಾಡುಗಳು ಮೂಡಿಬಂದಿದೆ.
ಚಿತ್ರದ ಪ್ರಚಾರ ಶ್ರೀಗುರು ರಾಘವೇಂದ್ರಾಯ ಆಶೀರ್ವಾದದೊಂದಿಗೆ ಶ್ರೀ ಸುಬುದೆಂದ್ರ ತೀರ್ಥರು ಮಂತ್ರಾಲಯ ಸ್ವಾಮೀಜಿಗಳ ಅಮೃತ ಹಸ್ತದಿಂದ ಬಿಡುಗಡೆಯ ದಿನಾಂಕವನ್ನು ಹಾಗೂ ಚಿತ್ರದ ಪ್ರಚಾರ ಅದ್ದೂರಿಯಾಗಿ ಚಾಲನೆ ನೀಡಿದರು.
ಗೋಪಾಲ್ ಕುಲಕರ್ಣಿ ನಿರ್ಮಾಣದ ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನೆಮಾದಲ್ಲಿ ಮುಖ್ಯ ಖಳನಾಯಕನಾಗಿ ಪಾತ್ರ ನಿರ್ವಹಿಸಿದರು, ಇವರು ಕಥಾಲೇಖನ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಕಥ ಲೇಖನ ಚಲನ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಗೊಂಡಿದೆ. ಬಿಡುಗಡೆಯಾದ ಮೂರು ಗಂಟೆಗಳಲ್ಲಿ 1 ಲಕ್ಷದ 25 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿರುವುದು ದಾಖಲೆಯೇ ಸರಿ.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಕಥ ಲೇಖನ ಚಿತ್ರದ ನಿರ್ಮಾಪಕರಾದ ಗೋಪಾಲ್ ಕುಲಕರ್ಣಿ ಕಳೆದ 22 ವರ್ಷಗಳಿಂದ ಲಂಡನ್ ನಲ್ಲಿ ವಾಸವಾವಿದ್ದರೂ ಕನ್ನಡ ಪ್ರೀತಿ ಮಾತ್ರ ಮರೆತಿಲ್ಲ, ಇದಕ್ಕಾಗಿಯೇ ಕರ್ನಾಟಕಕ್ಕೆ ಬಂದು ಕನ್ನಡ ಸಿನಿಮಾವನ್ನು ಮಾಡಿದ್ದೇನೆ ಎಲ್ಲರೂ ಸಿನಿಮಾವನ್ನು ವೀಕ್ಷಿಸಿ ಹಾರೈಸಬೇಕು. ಲಂಡನ್ ನಲ್ಲಿ ಇದ್ದು ಅಲ್ಲಿ ಗಳಿಸಿದ ಹಣವನ್ನು ಕನ್ನಡ ಇಂಡಸ್ಟ್ರಿಯಲ್ಲಿ ಹಾಕಿ ಈ ಸಿನಿಮಾವನ್ನು ಮಾಡಿದ್ದೇನೆ ಕನ್ನಡದ ಮೇಲಿರುವ ಪ್ರೀತಿ ವ್ಯಾಮೋಹ ಎನ್ನುತ್ತಾರೆ.