ಸಕಲೇಶಪುರ: ನಗರದ ಹೃದಯ ಭಾಗದಲ್ಲಿರುವ ಜಾತ್ರಾ ಮೈದಾನz ಲ್ಲಿರುವ ಕಸ ವಿಲೇವಾರಿ ಮಾಡದೆ ಜಾತ್ರಾ ಮಹೋತ್ಸವಕ್ಕೆ ಸಿದ್ದತೆ ನಡೆಸಿ ಕೊಳ್ಳುತ್ತಿರುವುದನ್ನು ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಹೋರಾ ಟ ನಡೆಸುವುದಾಗಿ ಕರವೆ ತಾಲ್ಲೂಕು ಅಧ್ಯಕ್ಷ ರಮೇಶ್ ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಕಲೇಶಪುರ ಪಟ್ಟಣದ ಕಸವನ್ನು ತಂದು ಈ ಮೈದಾನದಲ್ಲಿ ಹಾಕುತ್ತಿರುವುದರಿಂದ ಕೊಳೆತು ಸುತ್ತಮುತ್ತಲಿನ ಅಂಗಡಿ ಮಳಿಗೆ ಹಾಗೂ ಹಿಂದೂ ರುದ್ರಭೂಮಿ, ಕೆ.ಎಸ್.ಆರ್.ಟಿ.ಸಿ ಡಿಪೋ ಹಾಗೂ ಪಟ್ಟಣದ ಸುಭಾಷ್ ಮೈದಾನವು ಇರುವುದರಿಂದ ಸಾರ್ವಜನಿಕರಿಗೆ ಇದರಿಂದ ಬಹಳಷ್ಟು ರೋಗ ರುಜನ ಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಕಳೆದ ೨ ವರ್ಷದ ಹಿಂದೆ ಪ್ರತಿಭಟನೆ ಮಾಡುವ ಮೂಲಕ ಕಸ ವಿಲೆವಾರಿಗೆ ಒತ್ತಾಯಿಸಿದ್ದೆವು.
ಪ್ರತಿಭಟನೆಗೆ ಪ್ರತಿಕ್ರಯಿಸಿ ರಾತ್ರೋರಾತ್ರಿ ಕಸವನ್ನು ಒಂದೆಡೆ ರಾಶಿಯಿಟ್ಟು ಅದನ್ನು ಮೆಸ್ ಗಳ ಮೂಲಕ ಮುಚ್ಚಿ ಕಸದ ನಡುವೆ ಜಾತ್ರೆಯನ್ನು ನಡೆಸಿದ್ದರು. ಆದರೆ ಈ ಭಾರಿ ಯಾವುದೇ ಕಾರಣಕ್ಕೂ ಕಸವನ್ನು ವಿಲೆವಾರಿ ಮಾಡದೆ, ಆ ಜಾಗದಲ್ಲಿ ಜಾತ್ರೆ ನಡೆಸಲು ನಾವುಗಳು ಬಿಡುವುದಿಲ್ಲವೆಂದು ಈಗಾಗಲೇ ಪತ್ರಿಕಾ ವರದಿಯನ್ನು ನೀಡಿರುತ್ತೇವೆ. ಇದನ್ನು ಗಮನಿಸಿದ ತಾಲ್ಲೂಕು ಆಡಳಿತ ಸುಭಾಷ್ ಮೈದಾನದಲ್ಲಿ ಜಾತ್ರೆ ನಡೆಸಲು ತೀರ್ಮಾನ ಮಾಡಿರುವ ಬಗ್ಗೆ ಸುಳಿವು ಸಿಕ್ಕಿರುತ್ತದೆ ಯಾವುದೇ ಕಾರಣಕ್ಕೂ ಕಸವನ್ನು ಸಂಪೂರ್ಣವಾಗಿ ವಿಲೆವಾರಿ ಮಾಡದೆ, ಜಾತ್ರೆಯನ್ನು ನಡೆಸುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗ ಒಪ್ಪುವುದಿಲ್ಲ ಮತ್ತು ಸಂಪೂರ್ಣ ವಿರೋಧವನ್ನು ವ್ಯಕ್ತಪ ಡಿಸುತ್ತದೆ. ಒಂದುವೇಳೆ ಜಾತ್ರೆಯನ್ನು ನಡೆಸಿದ್ದೆ ಆದಲ್ಲಿ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ಜಾತ್ರೆ ಟೆಂಡರ್ಗೆ ಅಡ್ಡಿಪಡಿಸುತ್ತೇವೆ ಎಂದರು.
ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಮ್ಮ ಅಡ್ಡಿಯಿಲ್ಲ, ಆದರೆ ಪಟ್ಟಣದ ಹೃದಯ ಭಾಗದಲ್ಲಿ ಕಸವನ್ನು ಹಾಕಿ ಆ ಕಸದ ನಡುವೆಯೇ ಜಾತ್ರಾ ಮಹೋತ್ಸವನ್ನು ನಡೆಸುವುದು ಎಷ್ಟು ಸರಿ ಎಂಬುದು ನಮ್ಮ ಪ್ರಶ್ನೆ? ಆದಷ್ಟು ಬೇಗ ಕಸವನ್ನು ವಿಲೆವಾರಿ ಮಾಡಿ ನಂತರ ಜಾತ್ರೆಯ ಪ್ರಕ್ರಿಯೆಯನ್ನು ಮಾಡಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗ ವತಿಯಿಂದ ಒತ್ತಾಯಿಸುತ್ತಿದ್ದೇವೆ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಘಟಕ ಅದ್ಯಕ್ಷ ಉಮೇಶ್, ಉಪಾಧ್ಯಕ್ಷ ಗಿರೀಶ್ ಗೌಡ, ತಾ ಸಂಘಟನಾ ಕಾರ್ಯದರ್ಶಿ ರವಿ ನಾರಾಯಣ್, ನಗರ ಕಾರ್ಯ ದರ್ಶಿ ಶರಣ್, ಕರವೆ ಮುಖಂ ಡರಾದ ರಾಜೇಶ್ ಕುಮಾರ್, ಉಮರ್, ಬೆಳಗೋಡು ಗೌರವ ಅಧ್ಯಕ್ಷರು ಬಸವ ರಾಜ್, ಕ್ಯಾಮನಹಳ್ಳಿ ಉಪಾಧ್ಯಕ್ಷ ರಾದ ಗೋಪಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.