ಹಾಸನ: ಇಲ್ಲಿನ ಜಯ ಚಾಮ ರಾಜೇಂದ್ರ ಸರ್ಕಾರಿ ಆಸ್ಪತ್ರೆ(ಹಿಮ್ಸ್) ಯಲ್ಲಿ ಕೆಲಸ ನಿರ್ವಹಿ ಸುತ್ತಿರುವ ವೈದ್ಯರಿಗೆ ಕನ್ನಡ ಭಾಷೆ ಮಾತನಾ ಡಲು ಬಾರದ ಕಾರಣ ರೋಗಿ ಗಳಿಗೆ ತೀವ್ರ ತೊಂದರೆಯಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಅದರಲ್ಲು ರಾತ್ರಿ ಪಾಳಿಯಲ್ಲಿ ಬಹುತೇಕ ನೆರೆ ರಾಜ್ಯದ ವೈದ್ಯರನ್ನು ನೇಮಕ ಮಾಡಿರುವ ಕಾರಣ ಇಲ್ಲಿಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ವೈದ್ಯರೊಂದಿಗೆ ಸಮಾಲೋಚನೆ ಮತ್ತು ಚಿಕಿತ್ಸೆ ಬಗ್ಗೆ ವಿವರಿಸಲು ಕಷ್ಟಸಾಧ್ಯವಾಗಿದೆ.
ಪ್ರತಿದಿನ ರಾತ್ರಿ ವೇಳೆಯೇ ಸರ್ಕಾರಿ ಆಸ್ಪತ್ರೆಗೆ ರೋಗಿಗಳು, ಅಪಘಾತದಲ್ಲಿ ಸಿಲುಕಿದವರು ಚಿಕಿತ್ಸೆ ಗೆ ಹೆಚ್ಚು ಬರುವುದರಿಂದ ಸ್ಥಳೀಯ ವೈದ್ಯರನ್ನು ನಿಯೋಜಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಪಘಾತವಾದ ನಂತರ ತುರ್ತು ಚಿಕಿತ್ಸೆ ನೀಡಲು ಸ್ಥಳೀಯ ವೈದ್ಯರು ಇದ್ದರೆ ಅನುಕೂಲ ಈಗಿ ರುವ ಇತರೆ ರಾಜ್ಯದ ವೈದ್ಯರಿಗೆ ಕನ್ನಡ ಮಾತನಾಡಲು ಬಾರದ ಕಾರಣ ಸಹಾಯಕರಿಂದ ಮಾಹಿತಿ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಚಿಕಿತ್ಸೆ ವಿಳಂಬ ದ ಜೊತೆ ವೈದ್ಯರು ಮತ್ತು ರೋಗಿಗಳ ನಡುವಿನ ಸಮನ್ವಯತೆ ಕೊರತೆ ಎದುರಾಗಲಿದ್ದು ಸೂಕ್ತ ಚಿಕಿತ್ಸೆ ನೀಡಲು ತೊಡಕಾಗಲಿದೆ ಎಂಬ ಅಪವಾದ ಕೇಳಿಬಂದಿದೆ.
ಮುಂದಿನ ದಿನದಲ್ಲಾದರು ಕನ್ನಡ ಮಾತನಾಡಲು ಬರುವ ವೈದ್ಯರನ್ನು ನೇಮಿಸುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.