News Karnataka Kannada
Friday, May 03 2024
ದೆಹಲಿ

ನವದೆಹಲಿ: 14 ಸ್ಥಳಗಳ ಮೇಲೆ ಇಡಿ ದಾಳಿ, 10 ಕೋಟಿ ರೂ. ಮೌಲ್ಯದ ವಜ್ರ, ಚಿನ್ನ ವಶ

PMAY scam: ED raids 9 locations in Maharashtra
Photo Credit : IANS

ನವದೆಹಲಿ: ಪವರ್ ಬ್ಯಾಂಕ್ ಅಪ್ಲಿಕೇಶನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ 14 ಸ್ಥಳಗಳಲ್ಲಿ ದಾಳಿ ನಡೆಸಿ 10 ಕೋಟಿ ರೂ.ಮೌಲ್ಯದ ಚಿನ್ನ, ವಜ್ರಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ತಿಳಿಸಿದೆ.

ಬಿಎಸ್ಇ ಲಿಸ್ಟೆಡ್ ಕಂಪನಿಯಾದ ಸಾಗರ್ ಡೈಮಂಡ್ ಲಿಮಿಟೆಡ್, ಆರ್ ಹೆಚ್ ಸಿ ಗ್ಲೋಬಲ್ ಎಕ್ಸ್ಪೋರ್ಟ್ಸ್ ಲಿಮಿಟೆಡ್, ಅದರ ನಿರ್ದೇಶಕ ವೈಭವ್ ದೀಪಕ್ ಶಾ ಮತ್ತು ಸೂರತ್ ಎಸ್ಇಝಡ್, ಅಹಮದಾಬಾದ್ ಮತ್ತು ಮುಂಬೈನ ಸಹವರ್ತಿಗಳಿಗೆ ಸೇರಿದ  ಸ್ಥಳಗಳಲ್ಲಿ ಶೋಧ ನಡೆಸಲಾಯಿತು.

ಚಿನ್ನ ಮತ್ತು ವಜ್ರಗಳಲ್ಲದೆ, 25 ಲಕ್ಷ ರೂ ನಗದು, ಡಿಜಿಟಲ್ ಸಾಧನಗಳು, ನಕಲಿ ಆಮದು ಮತ್ತು ರಫ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಇಡಿ ವಶಪಡಿಸಿಕೊಂಡಿದೆ.

ವಂಚನೆಯ ವಿರುದ್ಧ ದೆಹಲಿ ಪೊಲೀಸರು ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ತನಿಖಾ ಸಂಸ್ಥೆ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ವೈಭವ್ ದೀಪಕ್ ಶಾ ಮತ್ತು ಸಾಗರ್ ಡೈಮಂಡ್ ಲಿಮಿಟೆಡ್ ಸೇರಿದಂತೆ ಭಾರತದಲ್ಲಿನ ತಮ್ಮ ಸಹವರ್ತಿಗಳೊಂದಿಗೆ ಶಾಮೀಲಾಗಿ ಚೀನೀ ಪ್ರಜೆಗಳು ನಿರ್ವಹಿಸುವ ಈ ಅಪ್ಲಿಕೇಶನ್ ಮೂಲಕ ಸಾವಿರಾರು ಸಾಮಾನ್ಯ ಜನರಿಗೆ ಮೋಸ ಮಾಡಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈವರೆಗೆ ಮೂವರನ್ನು ಬಂಧಿಸಲಾಗಿದ್ದು, ಹಲವಾರು ಜಾಮೀನು ರಹಿತ ವಾರಂಟ್ಗಳನ್ನು ಹೊರಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು