ಹುಬ್ಬಳ್ಳಿ: ಕರ್ನಾಟಕದಲ್ಲಿರೋ ರೈತರ ಸಮಸ್ಯೆಯೇ ಪಂಜಾಬ್ ನಲ್ಲಿಯು ಇದೆ. ಕೇಂದ್ರದಲ್ಲಿ ಮೂರು ಕೃಷಿ ಕಾಯ್ದೆ ವಾಪಸ್ ತೆಗೆದುಕೊಂಡಿದ್ದಾರೆ.ಆದರೆ ಕರ್ನಾಟಕದಲ್ಲಿ ವಾಪಸ್ ಪಡೆದಿಲ್ಲ. ಹೀಗಾಗಿ ಇಲ್ಲಿನ ರೈತರು ಆತ್ಮಹತ್ಯೆಗೆ ಶರಣಾಗ್ತಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ಮತ್ತು ದೆಹಲಿ ಮಾದರಿಯಲ್ಲಿ ಇಲ್ಲಿಯ ಜನರೂ ಎಎಪಿ ಸರ್ಕಾರ ತರಬೇಕು. ಇದು ಕರ್ನಾಟಕದ ರೈತರ ಸಮಸ್ಯೆಗಳನ್ನ ಎಎಪಿ ಬಗೆಹರಿಸುತ್ತದೆ . ಪಂಜಾಬ್ ನಲ್ಲಿ ನಾವು ಒಪಿಎಸ್ ಜಾರಿಗೆ ತಂದಿದ್ದೇವೆ. ಆದರೆ ಇಲ್ಲಿ ಇನ್ನೂ ಒಪಿಎಸ್ ಜಾರಿಗೆ ಬಂದಿಲ್ಲ. ಸ್ವಚ್ಛ, ಭ್ರಷ್ಟಾಚಾರ ಮುಕ್ತ ಸರ್ಕಾರ ತರುವುದರ ಮೂಲಕ ಉಚಿತ ವಿದ್ಯುತ್, ನಿರುದ್ಯೋಗ ನಿವಾರಣೆ, ಕೈಗಾರಿಕೆ ಸ್ಥಾಪನೆ ಮಾಡತ್ತೆವೆ ಎಂದರು.
ಇಲ್ಲಿ ನಾವು ಭಾತೃತ್ವದಿಂದ ಇದ್ದೇವೆ. ಆದ್ರೆ ಆ ರೀತಿ ಇಲ್ಲಿ ಇಲ್ಲಾ ಎಂದರು. ಆಸ್ಟ್ರೇಲಿಯಾದಲ್ಲಿ ಖಲಿಸ್ತಾನದವರಿಂದ ಹಿಂದೂ ದೇವಸ್ಥಾನ ಧ್ವಂಸ ವಿಚಾರವಾಗಿ ಮಾತನಾಡಿದ ಅವರು ಖಲಿಸ್ತಾನ ಪ್ರತ್ಯೇಕತೆ ಹೋರಾಟದ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದರು.