ಹಾಸನ: ಎಚ್.ಐ. ವಿ ಸೋಂ ಕಿತ ಸಮುದಾಯಗಳಿಗೆ ಸರ್ಕಾರದಿಂದ ಸರಿಯಾದ ಸೌಲಭ್ಯಗಳು ದೊರೆಯದೆ ವಂಚಿತರಾಗಿದ್ದಾರೆ ಎಂದು ಪ್ರಕೃತಿ ಸಮುದಾಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ವರ್ಷ ಹಾಸನ್ ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತ ನಾಡಿದ ಅವರು, ಎಚ್.ಐ.ವಿ ಸೋಂಕಿತರ ಆರೋಗ್ಯ ಕಾಪಾಡಲು ಎಆರ್ಟಿ ಚಿಕಿತ್ಸೆಗೆ ಅವಶ್ಯ ವಾಗಿರುತ್ತದೆ. ಆದರೆ ಈ ಚಿಕಿತ್ಸೆ ಪಡೆಯಲು ಆರ್ಥಿಕ ಸಂಕಷ್ಟದಿಂದ ಹಿಂಜರಿಯುವುದು ಕಂಡು ಬರುತ್ತಿದೆ. ಆದ್ದರಿಂದ ಪ್ರಕೃತಿ ಸಮು ದಾಯ ಸೇವಾ ಸಂಸ್ಥೆ ವತಿಯಿಂದ ಸೋಂಕಿತರಿಗೆ ದಾನಿಗಳ ನೆರವಿನಿಂದ ಸಾಧ್ಯವಾದಷ್ಟು ಚಿಕಿತ್ಸೆ ನೀಡಲಾಗುತ್ತಿದೆ. ಎಚ್ಐವಿ ಸಮುದಾಯಕ್ಕೆ ಅಗತ್ಯಕ್ಕೆ ತಕ್ಕಂತೆ ಸರ್ಕಾರದಿಂದ ಸವಲತ್ತು ದೊರೆಯುತ್ತಿಲ್ಲ ಎಂದರು.
ಜೀವನಾಶ್ರಮ ನೆಟ್ವರ್ಕ್ನ ಚಂದ್ರಶೇಖರ್ ಮಾತನಾಡಿ, ಎಚ್ಐವಿ ಸಮುದಾಯವರು ಸಾರ್ವಜನಿಕ ವಲಯದಲ್ಲಿ ಬದುಕುವುದು ಕಷ್ಟಕರವಾಗಿದೆ. ಸೋಂಕಿತರಿಗಾಗಿ ಸರ್ಕಾರ ವಾಸದ ಮನೆ ಸೇರಿದಂತೆ ಇನ್ನಿತರೆ ಸೌಲ ಭ್ಯಗಳನ್ನು ನೀಡುವ ಭರವಸೆಯನ್ನು ನೀಡುತ್ತದೆಯೇ ಹೊರತು ಇದುವರೆಗೂ ಅನುಷ್ಟಾನಕ್ಕೆ ತಂದಿಲ್ಲ. ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಸರಿಯಾದ ರೀತಿಯಲ್ಲಿ ಎಆರ್ಟಿ ಮಾತ್ರೆಗಳು ಸಿಗುತ್ತಿಲ್ಲ. ಎಆರ್ಟಿ ಮಾತ್ರೆಯಲ್ಲಿ ಡೋಸ್ನ ಹಂತ ಹೆಚ್ಚಿರುತ್ತದೆ ಇದರ ಸಮತೋಲನಕ್ಕೆ ನ್ಯೂಟ್ರಿಷನ್ ಅಗತ್ಯವಿರುತ್ತದೆ. ಆದರೆ ಮದ್ಯಮ ವರ್ಗದವರು ಆರ್ಥಿಕ ಸಂಕಷ್ಟದಿಂದ ಖರೀದಿ ಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಸರ್ಕಾರ ಎಆರ್ಟಿ ಚಿಕಿತ್ಸೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಅಂತ್ಯೋದಯ ಕಾರ್ಡ್ ವಿತರಿಸ ಲು ಈಗಾಗಲೇ ಮನವಿ ಮಾಡಿ ದ್ದೇವೆ ಇದರ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸೋಂಕಿತರಿಂದ ಇತರರಿಗೆ ಹೆಚ್ಐವಿ ಹೆಚ್ಚಾಗಿ ಹರಡು ತ್ತಿರುವುದು ಕಂಡು ಬರುತ್ತಿದ್ದು ಸೋಂಕಿನ ಬಗ್ಗೆ ಜಾಗೃರಾಗಿರು ವುದು ಅತಿಮುಖ್ಯ. ಚನ್ನರಾಯ ಪಟ್ಟಣ, ಅರಸೀಕೆರೆ, ಹಾಸನದಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗುತ್ತಿದೆ. ಹಾಸನದಲ್ಲಿ ತಿಂಗಳಿಗೆ ೪೦ರಿಂದ ೫೦ ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಯುವ ಪೀಳಿಗೆಯಲ್ಲಿ ಹೆಚ್ಚಾಗುತ್ತಿರುವುದು ಬೇಸರ ಸಂಗತಿ ಎಂದರು.
ಡಾ|| ಪೂರ್ಣಿಮಾ ಮಾತ ನಾಡಿ, ಹೆಚ್ಐವಿ ಸೋಂಕಿಗೆ ತುತ್ತಾದ ಕೂಡಲೇ ಹಲವರು ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳವುದು ಹೆಚ್ಚು ಇದಕ್ಕಾಗಿ ಸೋಂಕಿತರಿಗೆ ಇದರ ಅರಿವು ಮೂಡಿಸುವುದು ಅಗತ್ಯವಿರುತ್ತದೆ. ಕೌನ್ಸಿಲಿಂಗ್ ಮಾಡುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಎ.ಆರ್.ಟಿ ಸಂಸ್ಥೆ ಮಾಡುತ್ತದೆ. ತದನಂತರ ಸೋಂಕಿತರಿಗೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ತಾನಾಜಿ, ರವಿಕುಮಾರ್ ಇದ್ದರು.