ಮಂಗಳೂರು; ರಾಜ್ಯದಲ್ಲಿ ಬರುವ ಮೇ ತಿಂಗಳು 2023ರಂದು ವಿಧಾನಸಭಾ ಚುನಾವಣಾ ನಡೆಯುತ್ತಿದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ 3 ಬಿಲ್ಲವ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಅವಕಾಶ ನೀಡಬೇಕಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಈ ಮೂಲಕ ವಿನಂತಿ ಮಾಡಿದರು.
ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಂಪರಾಗತವಾಗಿ ಬಹು ಸಂಖ್ಯಾತ ಬಿಲ್ಲವರು ೭ ಸಮುದಾಯ ಮಾನ್ಯ ಶ್ರೀ ಜನಾರ್ಧನ ಪೂಜಾರಿಯವರ ನಾಯಕತ್ವಕ್ಕೆ ಗೌರವ ಮತ್ತು ಅವರ ಅನಾರೋಗ್ಯದ ನಂತರ ಕಳೆದ ವಿಧಾನಸಭಾ ನೀಡಲಾಯಿತು ಮತ್ತು ಬೆಂಬಲವನ್ನು ನೀಡುತ್ತಿತ್ತು.
ಚುನಾವಣೆಯಲ್ಲಿ 1 ಬಿಲ್ಲವ ಅಭ್ಯರ್ಥಿಗೆ ಮಾತ್ರ ಅವಕಾಶ ಲೋಕಸಭಾ ಚುನಾವಣೆಯಲ್ಲಿ ಬೇರೆ ಅಭ್ಯರ್ಥಿಗೆ ಅವಕಾಶ ನೀಡಲಾಯಿತು. ಆದುದರಿಂದ ಸರಿಯಾದ ನಾಯಕತ್ವ ಇಲ್ಲದೆ ಬಿಲ್ಲವ ಮತದಾರರು ಕಾಂಗ್ರೆಸೇತರ ಪಕ್ಷಗಳತ್ತ ಒಲವು ತೋರಿಸಿದರು.
ಆದುದರಿಂದ ಈ ಸಲದ ಚುನಾವಣೆಯಲ್ಲಿ ಸರಿಯಾದ ನಾಯಕತ್ವದ ಬಿಲ್ಲವ ಅಭ್ಯರ್ಥಿಗಳಿಗೆ ಕನಿಷ್ಠ 3 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದಲ್ಲಿ ಖಂಡಿತವಾಗಿಯೂ ಗೆಲ್ಲಲು ಅವಕಾಶ ಇರುತ್ತದೆ ಮತ್ತು ಎಲ್ಲಾ 8 ಕ್ಷೇತ್ರಗಳಲ್ಲಿ ಕೂಡಾ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಬಿಲ್ಲವ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಮುಖಂಡರುಗಳಾದ ಉಲ್ಲಾಸ್ ಕೋಟ್ಯಾನ್ ಪುತ್ತೂರು , ದನಂಜಯ ಮಟ್ಟು ಮೂಲ್ಕಿ, ಯೋಗೀಶ್ ಕುಮಾರ್ ಬೆಳ್ತಂಗಡಿ, ಗಣೇಶ್ ಪೂಜಾರಿ ಗಂಜಿಮಠ ಉಪಸ್ಥಿತರಿದ್ದರು