ಹಾಸನ: ಅಕ್ರಮ ಗೋಮಾಂಸ ಮಾರಾಟ ಕೇಂದ್ರದ ಮೇಲೆ ದಾಳಿ ಮಾಡಿದ್ದ ಪೊಲೀಸರಿಗೆ ವಾಪಸ್ ಬರುವಂತೆ ಫೋನ್ನಲ್ಲಿ ಶಾಸಕ ಪ್ರೀತಂಗೌಡ ಮಾತನಾಡಿದ್ದಾರೆನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಸನದ ಶ್ರೀನಗರ ಬಡಾವಣೆಯಲ್ಲಿ ದಾಳಿ ಮಾಡಿದ್ದ ವೇಳೆ ಪೊಲೀಸ್ ಅಧಿಕಾರಿಗಳ ಜೊತೆ ಶಾಸಕರು ಮಾತನಾಡಿದ್ದಾರೆನ್ನಲಾದ ಆಡಿಯೋ ಇದಾಗಿದ್ದು ಅವರು ನಮ್ಮ ಅಣ್ಣ ತಮ್ಮಂದಿರಿದ್ದಂತೆ ಎಂದು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಹಾಸನದ ಶ್ರೀನಗರ ಬಡಾವಣೆಯಲ್ಲಿ ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ ಮಾಡಿದ್ದ ವೇಳೆ ಶಾಸಕ ಪ್ರೀತಂ ಗೌಡ ಇನ್ಸ್ಪೆಕ್ಟರ್ ಯೋಗೀಶ್ ಗೌಡ ಅವರನ್ನು ಸ್ಥಳದಿಂದ ವಾಪಸ್ ಬರುವಂತೆ ಹೇಳಿರುವ ವಿಡಿಯೋ ಸದ್ಯ ನಗರದಲ್ಲಿ ಪ್ರಚಲಿತದಲ್ಲಿದೆ. ಅವರು ಕೂಡ ನಮ್ಮ ಅಣ್ಣ ತಮ್ಮಂದಿರಿದ್ದಂತೆ, ಚುನಾವಣೆ ವೇಳೆ ಇಂತಹ ಕೆಲಸ ಮಾಡಬೇಡಿ ಎಂದು ದಯನೀಯವಾಗಿ ಇನ್ಸ್ಪೆಕ್ಟರ್ ಅವರನ್ನು ಶಾಸಕರು ಕೇಳಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ.