ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಒಂದಲ್ಲ ಒಂದು ಖ್ಯಾತೆ, ಗೊಂದಲ, ಭಿನ್ನಾಭಿಪ್ರಾಯ, ಹಗರಣಗಳು ಸುತ್ತುಕೊಂಡ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷವಾದ ಬಿ.ಎಸ್.ಪಿ ಮಾತ್ರ ಸದ್ದುಗದ್ದಲವಿಲ್ಲದೆ ಇಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರಕ್ಕೆ ಮುಂದಾಗಿರುವುದು ಪ್ರಮುಖ ಮೂರು ಪಕ್ಷಗಳಿಗೆ ತಲೆನೋವು ತಂದಿದೆ ಎನ್ನಲಾಗಿದೆ.
ಕಳೆದ ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷದೊಂದಿಗೆ ಒಪ್ಪಂದದಿಂದ ಚುನಾವಣೆಯನ್ನು ಎದುರಿಸಿದ್ದ ಬಿ.ಎಸ್.ಪಿ ೨೦೨೩ ರಲ್ಲಿ ತನ್ನದೆಯಾದ ಸ್ವತಂತ್ರ ಅಭ್ಯರ್ಥಿಯನ್ನು ಈಗಾಗಲೇ ಕಣ ಇಳಿಸುವ ಮೂಲಕ ಕ್ಷೇತ್ರದಲ್ಲಿ ಸಂಘಟನೆಗೆ ಮುಂದಾಗಿದೆ.
೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಇದೇ ತಾಲ್ಲೂಕಿನ ಮನೆಮಗ ಗಂಗಾಧರ್ ಬಹುಜನ್ ೨೦೨೩ರ ಬಿ.ಎಸ್.ಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಮತಯಾಚನೆ ಜೊತೆಗೆ ಕ್ಷೇತ್ರದ ಸಮಸ್ಯೆಗಳನ್ನು ಅಲಿಸುತ್ತಾ ಮಿಂಚಿನ ಸಂಚಾರಕ್ಕೆ ಮುಂದಾಗಿದ್ದಾರೆ.
ಬಿ.ಎಸ್.ಪಿ ರಾಷ್ಟ್ರೀಯ ಪಕ್ಷವಾಗಿ ಸೈದ್ಧಾಂತಿಕ ತತ್ವಸಿದ್ಧಾಂತದ ಮೇಲೆ ರೂಪಿತವಾಗಿ ಜನ ಮನ್ನಣೆಗಳಿಸಿದೆ. ಸಂವಿಧಾನದ ಆಶೋತ್ತರಗಳ ಕೆಲಸವನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ಜನತೆ ಬೆಂಬಲ ನೀಡುವಂತೆ ಮನವಿ ಮಾಡಿದರು.