News Karnataka Kannada
Tuesday, May 07 2024
ಹಾಸನ

ಹಾಸನ : ರೈತರು, ಬಡವರ ಕಡೆಗಣಿಸಿ ಬಿಜೆಪಿಯಿಂದ ಗಿಮಿಕ್ ಬಜೆಟ್- ಈ.ಎಚ್. ಲಕ್ಷ್ಮಣ್

BJP's gimmick budget ignoring farmers, poor
Photo Credit : News Kannada

ಹಾಸನ : ಕೇಂದ್ರ ಬಜೆಟ್ ನಲ್ಲಿ ರೈತ ಸಮುದಾಯ ಹಾಗೂ ಬಡವ ರನ್ನು ಕಡೆಗಣಿಸಲಾಗಿದೆ. ಚುನಾವಣೆಯ ದೃಷ್ಠಿಯಿಂದ ಸುಳ್ಳು ಗಿಮಿಕ್ ಬಜೆಟ್ ಇದಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈ.ಎಚ್. ಲಕ್ಷ್ಮಣ್ ಅಸಮಾದಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರನ್ನು ಮರಳು ಮಾಡಲು ರಾಜ್ಯಕ್ಕೆ ಹಲವು ಯೋಜನೆ ಘೋಷಣೆ ಮಾಡಿದ್ದಾರೆ. ಕೇಂದ್ರ ಸರಕಾರದಿಂದ ರಾಜ್ಯದ ಜನರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ನಡೆದಿದೆ.

ಮುಂದಿನ ವಿಧಾನ ಸಭೆ ಚುನಾವಣೆ ದೃಷ್ಟಿಯಲ್ಲಿ ರಾಜ್ಯಕ್ಕೆ ಯೋಜನೆಗಳನ್ನು ಘೋಷಣೆ ಮಾಡಿದ್ದು, ಈ ಯೋಜನೆಗಳು ಕಾಗದದಲ್ಲಿ ಮಾತ್ರ ಇರಲಿದೆ. ಚುನಾವಣೆ ಘೋಷಣೆ ಆದಮೇಲೆ ಕಾರ್ಯಕ್ರಮ ಜಾರಿಗೆ ತರಲು ಆಗೋದಿಲ್ಲ. ಕೇಂದ್ರ ಬಜೆಟ್ ಚುನಾವಣೆ ಹಿನ್ನೆಲೆ ಜನ ರನ್ನು ಸೆ ಯಲು ಘೋಷಣೆಗಷ್ಟೆ ಸೀಮಿತವಾ ಗಿದೆ ಎಂದು ಟೀಕಿಸಿದ ಅವರು ಇದರಿಂದ ಜನ ಸಾಮಾನ್ಯರಿಗೆ, ರೈತರಿಗೆ ಯಾವುದೇ ಉಪ ಯೋ ಗವಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ದೇವ ರಾಜೇಗೌಡ ಮಾತನಾಡಿ, ಜಿಲ್ಲೆ ಯಲ್ಲಿ ಯಾರು ಸಹ ಪಕ್ಷ ಬಿಟ್ಟಿ ಹೋಗುವವರಿಲ್ಲ. ಯಾರಿಗೆ ಟಿಕೆಟ್ ನೀಡಬೇಕು ಎಂಬುವುದನ್ನು ಹೈಕಾಮಾಂಡ್ ನೋಡಿಕೊಳ್ಳಲಿದೆ. ಕಾಂಗ್ರೆಸ್ ಪಕ್ಷದಿಂದ ಅಧಿಕಾರ ಪಡೆದವರು ಎಂದಿಗೂ ಕಾಂಗ್ರೆಸ್ ಪರವಾಗಿ ಮಾತನಾಡಲಿಲ್ಲ ಎಂದು ದೂರಿದರು.

ಭದ್ರಾ ಮೇಲ್ದಂಡೆ ಯೋಜನೆ ೫೩೦೦ ಕೋಟಿಯನ್ನು ಒಪ್ಪಿಗೆ ಪಡೆಯದೆ ಮೀಸಲಿಟ್ಟಿರುವುದು ಚುನಾವಣೆ ಗಿಮಿಕ್. ಸಿರಿಧಾನ್ಯ ಅಭಿವೃದ್ಧಿ ಪಡಿಸಬೇಕು ಎಂದು ಕೇವಲ ಹೆಸರು ಬದಲಾವಣೆ ಮಾಡಿದರೆ ಸಾಲದು. ಕಾರ್ಯರೂಪಕ್ಕೆ ತರಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿಸುವ ಬಜೆಟ್ ಇದಾಗಲಿಲ್ಲ. ಕೈಗಾರಿಕಾರಿಕರಣ ವನ್ನು ನೀಡಿದ್ದರೆ ನಿರುದ್ಯೋಗ ಕಡಿಮೆಯಾಗುತಿತ್ತು. ಬಡವನ, ರೈತರಿಗೆ, ಸಾಮಾನ್ಯ ಜನರಿಗೆ ಉಪಯೋಗವಾಗುವ ಬಜೆಟ್ ಇದಾಗಲಿಲ್ಲ ಎಂದು ಅಸಮಧಾನ ವ್ಯಕ್ತಪಡಿದಸಿರು.

ಮಾಜಿ ಶಾಸಕ ಪುಟ್ಟೆಗೌಡ, ವಿನೊದ್, ನಾಯಕರಹಳ್ಳಿ ಅಶೋಕ್ ಸೇರಿದಂತೆ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು