ಹಾಸನ: ಹಾಸನ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲ ಮುಂದುವರಿದಿರು ವಾಗಲೇ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿಪಡಿಸಿರುವ ಜೆಡಿಎಸ್ ಪ್ರಮುಖರು ತಮ್ಮ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲ ಇಂದಿನವರೆಗೂ ಮುಂದುವರೆದಿದ್ದು ಪ್ರಮುಖ ಆಕಾಂಕ್ಷಿಗಳಾದ ಎಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಶಾಸಕ ದಿವಂಗತ ಎಚ್ಎಸ್ ಪ್ರಕಾಶ್ ಅವರ ಪುತ್ರ ಎಚ್ಪಿ ಸ್ವರೂಪ್ ನಾಮಪತ್ರ ಸಲ್ಲಿಕೆ ದಿನಾಂಕವನ್ನು ನಿಗದಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಏಪ್ರಿಲ್ ೧೪ರಂದು ಭವಾನಿ ರೇವಣ್ಣ ಅವರು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಹಾಗೂ ಸ್ವರೂಪ ಏಪ್ರಿಲ್ ೧೭ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಈ ಇಬ್ಬರಿಗೂ ಜೆಡಿಎಸ್ ಪಕ್ಷದಿಂದ ಇದುವರೆಗೂ ಟಿಕೆಟ್ ಘೋಷಣೆ ಕುರಿತು ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ ಆದರೂ ಸಹ ನಾಮಪತ್ರ ಸಲ್ಲಿಕೆಗೆ ಮುಂ ದಾಗಿರುವುದು ಇಬ್ಬರಲ್ಲಿ ಯಾರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿ ದ್ದಾರೆ ಅಥವಾ ಬೇರೆ ಪಕ್ಷದಿಂದ ಬಿ ಫಾರಂ ಸಿಗಲಿದೆ ಎಂಬ ಗೊಂದಲವು ಮುಂದುವರೆದಿದೆ.
ಭವಾನಿ ರೇವಣ್ಣ ಅವರಿಗೆ ಅಥವಾ ಇತರೆ ಜೆಡಿಎಸ್ ಮುಖಂ ಡರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ಕುರಿತು ಎಚ್ ಡಿ ರೇವಣ್ಣ ಅವರು ಈಗಾಗಲೇ ಹಾಸನ ಜೆಡಿಎಸ್ ಮುಖಂಡರ ಸಭೆಯಲ್ಲಿ ಘೋಷಣೆ ಮಾಡಿದ್ದು ಸ್ವರೂಪ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವ ಪ್ರಶ್ನೆ ಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಗೊಂದಲದ ನಡುವೆಯೂ ಎಚ್ಪಿ ಸ್ವರೂಪ್ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದು ಏ.೧೦ ರಂದು ತಮ್ಮ ಜನ್ಮದಿನದ ಕಾರ್ಯಕ್ರಮದಲ್ಲಿ ಸಹಸ್ರಾರು ಕಾರ್ಯಕರ್ತರೊಂದಿಗೆ ಸಂಭ್ರಮ ಆಚರಣೆ ಮಾಡಿದ್ದಾರೆ. ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಜೆಡಿಎಸ್ ಪಕ್ಷದಲ್ಲಿಯೇ ಗುರುತಿಸಿಕೊಂಡು ಪ್ರಚಾರ ಮಾಡಿರುವುದು ಕಾಣಬಹುದು.
ಎಚ್ ಪಿ ಸ್ವರೂಪ್ ಪರ ನಿಂತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಲವು ತಿಂಗಳಿನಿಂದ ಟಿಕೆಟ್ ನೀಡುವ ಕುರಿತು ಭರವಸೆಗಳನ್ನು ನೀಡಿದ್ದಾರೆ. ಇತ್ತ ಪ್ರಚಾರದಲ್ಲಿ ನಿರತರಾಗಿರುವ ಭವಾನಿ ರೇವಣ್ಣ ಅವರಿಗೆ ಹಾಸ ನದ ಕೆಲ ಜೆಡಿಎಸ್ ಮುಖಂಡರು ಹಲವು ಸುತ್ತಿನ ಮಾತುಕತೆ ನಡೆಸಿ ಬೆಂಬಲಸೂಚಿಸಿದ್ದಾರೆ.
ಏ.೧೦ ಸೋಮವಾರ ನಡೆದಂತಹ ಸ್ವರೂಪ ಜನ್ಮ ದಿನದಂದು ನೂರಾರು ಕಾರ್ಯ ಕರ್ತರು ಹಾಗೂ ಮುಖಂಡರು ಶುಭಾಶಯ ಕೋರಿ ಸಂಭ್ರಮಿಸಿದರು. ಈ ಎಲ್ಲಾ ಬೆಳವಣಿಗೆ ನಡುವೆ ಜೆಡಿಎಸ್ ಪಕ್ಷದಿಂದ ಬಿ ಫಾರಂ ಯಾರಿಗೆ ದೊರೆಯಲಿದೆ ಎಂಬುದೇ ನಿಗೂಢ ವಾಗಿದೆ.
ಬೆಳಗಾಗುವುದರಲ್ಲಿ ಸ್ಟೇಟಸ್ ಮಾಯ: ಏ. ೧೦ ರಂದು ಸೋಮವಾರ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಚ್.ಪಿ ಸ್ವರೂಪ್ ಅವರ ಜನ್ಮದಿನ ಆಚರಣೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾಗೂ ಸ್ವರೂಪ್ ಅಭಿಮಾನಿಗಳು ಜನ್ಮದಿನದ ಸಂಭ್ರಮದ ಫೋಟೋಗಳನ್ನು ತಮ್ಮ ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿ ಸಂಭ್ರಮಿಸಿದರು. ಆದರೆ ಬೆಳಗಾಗುವುದರಲ್ಲಿ ಸ್ವರೂಪ್ ಸಂಭ್ರಮದ ಸ್ಟೇಟಸ್ಗಳು ಮಾಯವಾಗಿ ಇತರೆ ಚಿತ್ರಗಳು ಪ್ರಕಟವಾಗಿದೆ.