ಉಡುಪಿ: ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಚುನಾವಣಾ ನಿರ್ವಹಣ ಸಮಿತಿಗಳ ರಚನೆ ಕುರಿತಂತೆ ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಸಭೆ ನಡೆಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ನಿರ್ವಹಣ ಸಮಿತಿಗಳ ರಚನೆ ಕುರಿತು ಚರ್ಚಿಸಲಾಯಿತು.
ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಪ್ರಖ್ಯಾತ್ ಶೆಟ್ಟಿ ˌಭಾಸ್ಕರ ರಾವ್ ಕಿದಿಯೂರು ˌ ಕುಶಾಲ್ ಶೆಟ್ಟಿ ˌ ರಮೇಶ್ ಕಾಂಚನ್ ˌ ದಿನಕರ್ ಹೇರೂರು ˌ ಮಮತಾ ಶೆಟ್ಟಿ ˌರೋಷನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.