News Karnataka Kannada
Monday, May 20 2024
ಹಾಸನ

ಬೇಲೂರು: ಬಸ್ ತಂಗುದಾಣ ಆಕ್ರಮಿಸಿ ಕಾಂಪೌಂಡ್ ನಿರ್ಮಾಣ, ಗ್ರಾಮಸ್ಥರಿಂದ ತೆರವು

Belur: Illegally encroaching on bus stand, construction of compound, eviction of land
Photo Credit : News Kannada

ಬೇಲೂರು: ತಾಲೂಕಿನ ಚಿಕ್ಕಮಗಳೂರು ಮೂಡಿಗೆರೆ ಗಡಿಭಾಗದ ಬಸ್ಕಲ್ ನಲ್ಲಿ ಈ ಹಿಂದೆ ಬಸವೇಗೌಡ ಎಂಬ ವ್ಯಕ್ತಿಯೊಬ್ಬರು ಅಕ್ರಮವಾಗಿ ಬಸ್ ತಂಗುದಾಣವನ್ನು ಆಕ್ರಮಿಸಿ ಕಾಂಪೌಂಡ್ ನಿರ್ಮಾಣ ಮಾಡಿದ್ದರು.ಇದನ್ನು ವಿರೋಧಿಸಿ ಬಸ್ಕಲ್ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು. ಅದನ್ನು ತೆರವುಗೊಳಿಸಬೇಕೆಂಬ ಆದೇಶದ ಮೇರೆಗೆ ಗ್ರಾಮಸ್ಥರೆಲ್ಲಾ ಸೇರಿ ಆ ಜಾಗದಲ್ಲಿ ಮೊದಲು ಇದ್ದ ಜಾಗದಲ್ಲೇ ಬಸ್ ನಿಲ್ದಾಣ ಮಾಡಲು ಕಂಪೌಂಡ್ ತೆರವುಗೊಳಿಸಿದರು.

ಇದೇ ವೇಳೆ ಮಾತನಾಡಿದ ಕಳ್ಳೇರಿ ಗ್ರಾಮಪಂಚಾಯತಿ ಸದಸ್ಯ ಶ್ರೀನಿವಾಸ್ ಈ ಹಿಂದೆ ಇದ್ದಂತ ಬಸ್ ನಿಲ್ದಸಣವನ್ನು ಬಸವೇಗೌಡ ಹಾಗೂ ದಿನೇಶ್ ಎಂಬುವವರು ಒತ್ತುವರಿ ಮಾಡಿದ್ದರು.ಆನಂತರ ನಮ್ಮ ಗ್ರಾಮಸ್ಥರೆಲ್ಲಾ ಸೇರಿ ಹೋರಾಟ ಮಾಡಿದ್ದೆವು.ಇದನ್ನು ಗಮನಿಸಿದ ಸರ್ಕಾರ ನಮ್ಮನ್ನು ಹಾಗೂ ಜಿ ಎಮ್ ಮಂಜುನಾಥ್ ಅವರನ್ನು ಈಜಾಗವನ್ನು ದಾನವಾಗಿ ಬರೆದುಕೊಡಬೇಕೆಂದು ಕೇಳಿದ ನಂತರ ರಾಜ್ಯಪಾಲರಿಗೆ ಜಾಗವನ್ನು ಬರೆದುಕೊಟ್ಟರು.

ನಂತರ ಸರ್ಕಾರ ಈ ಜಾಗವನ್ನು ಗುರುತಿಸಿ ತೆರವುಗೊಳಿಸುವಂತೆ ನೋಟೀಸ್ ಕೊಟ್ಟಿದ್ದರು.ಆದರೆ ಇದನ್ನು ಅವರು ತೆರವು ಗೊಳಿಸಿರಲಿಲ್ಲ ಈಗ ನಂದೀಪುರ ಪಂಚಾಯತಿಯವರು ತೆರವುಕಾರ್ಯ ಮಾಡಿದ್ದಾರೆ.ನಮ್ಮ ಮನವಿ ಏನೆಂದರೆ ಯಾವುದೇ ಪಕ್ಷದ ಕಾರ್ಯಕರ್ತರನ್ನು ಓಲೈಸುವ ಕೆಲಸ ಮಾಡಬಾರದು.ನಮ್ಮ ನಾಯಕರು ಸ್ಥಳೀಯ ಆಸ್ಪತ್ರೆ, ದೇವಾಲಯಗಳನ್ನು ಸರ್ಕಾರದ ಆಸ್ತಿಗಳನ್ನು ಉಳಿಸುವಂತಹ ಕೆಲಸ ಮಾಡಬೇಕು.ಎಂದುತಿಳಿಸಿದರು.

ನಂತರ ಮಾತನಾಡಿದ ಗ್ರಾಮದ ರಮೇಶ್ ತಾಲೂಕಿನ ಗಡಿ ಭಾಗದ ನಂದೀಪುರ ಪಂಚಾಯತಿ ಇಲ್ಲಿ ಗೆಂಡೇಹಳ್ಳಿ ಯ ಮಂಜುನಾಥ್ ಅವರು ಜಾಗವನ್ನು ಬಸ್ ನಿಲ್ದಾಣ ಮಾಡಲು ಕೊಟ್ಟಿದ್ದರು. ಆದರೆ ಬಸವೇಗೌಡರು ಹಾಗೂ ಅವರ ಮಗ ಒತ್ತುವರಿ ಮಾಡಿದ್ದರು. ಸುಮಾರು ೫೦ ವರ್ಷದಿಂದ ಇದ್ದ ಬಸ್ ನಿಲ್ದಾಣ ಇದು ಎಲ್ಲರಿಗೂ ಸಹಾಯವಾಗುತ್ತಿದ್ದು ಅದನ್ನು ಒತ್ತುವರಿ ಮಾಡಿದ್ದರು ತೆರವುಗೊಳಿಸಬೇಕೆಂದು ಪ್ರತಿಭಟನೆ ಮಾಡಿದ್ದರೂ ಆಗಲಿಲ್ಲ.ಇದೇ ಸಮಯದಲ್ಲಿ ನಂದೀಪುರ ಗ್ರಾಮಪಂಚಾಯತಿಯವರು ತೆರವು ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದಕ್ಕೆ ಸಹಕರಿಸಿದ ಗ್ರಾಪಂಯವರಿಗೂ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಗ್ರಾಮಸ್ಥರಾದ ರಮೇಶ್ ತಿಮ್ಮೇಗೌಡರು ಚಂದ್ರು ಕೆಳಗಣೆ,ವಿಶ್ವನಾಥ್, ಜಯರಾಂ , ಬಸ್ಕಲ್ ಪಂ ಮಾಜಿ ಅಧ್ಯಕ್ಷ ನಾರಾಯಣ್,ಗಿರೀಶ್ ಗೆಂಡೇಹಳ್ಳಿ, ಮಂಜುನಾಥ್, ಸೊಮೇಶ್, ನಂದೀಪುರ ಗ್ರಾಪಂ ಸದಸ್ಯರು ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು