News Karnataka Kannada
Thursday, May 09 2024
ಹಾಸನ

ಬೇಲೂರು: ವಿದ್ಯುತ್ ಸಮಸ್ಯೆ ಬಗೆಹರಿಸದ ಇಂಜಿನಿಯರ್ ರೇವಣ್ಣ ವಿರುದ್ಧ ರೈತರ ಆಕ್ರೋಶ

Belur: Farmers protest against engineer Revanna for not solving power problem
Photo Credit : News Kannada

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ವಿದ್ಯುತ್ ಕೇಂದ್ರ ಇದ್ದು ಬಿಕ್ಕೋಡು ಅರೇಹಳ್ಳಿ ಹೋಬಳಿ ವ್ಯಾಪ್ತಿಗೆ ಸಂಬಂಧಪಟ್ಟ ಅಧಿಕಾರಿ ಆಗಿರುವ ರೇವಣ್ಣ ಏನು ಕೆಲಸ ನಿರ್ವಹಿಸುತ್ತಿದ್ದಾರೆ ತಿಳಿಯದು. ಕನಿಷ್ಠ ದಿನಕ್ಕೆ ಹಗಲು ಒಂದು ವ್ಯಾಪ್ತಿಯಲ್ಲಿ ೨೫ ರಿಂದ ೩೦ ಬಾರಿ ವಿದ್ಯುತ್ ತೆಗೆಯುವುದು ಹಾಕುವುದು ಮಾಡುತ್ತಾರೆ ಹೀಗಾದರೆ ರೈತರು ಬೆಳೆಗಳಿಗೆ ಕಾಫಿ ತೋಟಕ್ಕೆ ನೀರನ್ನು ಹಾಯಿಸಲು ಹೇಗೆ ಸಾಧ್ಯ ಒಂದು ದಿನ ಅಥವಾ ಎರಡು ದಿನ ಸಮಸ್ಯೆ ಆದರೆ ಪರವಾಗಿಲ್ಲ. ಆದರೆ ಬಿಕ್ಕೋಡು ಅರೇಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆ ಸರಿಪಡಿಸಲಾಗದ ಅಧಿಕಾರಿಗಳು ವಿದ್ಯುತ್ ಇಲ್ಲವೆಂದು ಲೈನ್ ಮ್ಯಾನ್ ಗಳಿಗೆ ವಿಷಯ ತಿಳಿಸಿದರೆ ಅಲ್ಲಿ ಜಂಪ್ ಹೋಗಿದೆ, ಇಲ್ಲಿ ಜಂಪ್ ಹೋಗಿದೆ ಎಂದು ಸಭಾಭೂ ಉತ್ತರ ನೀಡುತ್ತಾರೆ ಮತ್ತು ಲೋಡ್ ಸೆಡ್ಡಿಂಗ್ ಇದೆ ಎಂದು ಕಾಗಕ್ಕ ಗೂಬಕ್ಕನ ಕಥೆ ಹೇಳಲು ಶುರು ಮಾಡಿದ್ದಾರೆ.

ಈ ರೀತಿ ಆದರೆ ರೈತ ಬೆಳೆದ ಬೆಳೆಗಳು ಬಿಸಿಲಿನ ತಾಪಕ್ಕೆ ಸುಟ್ಟು ಕರಕಾಲಗುತ್ತಿವೆ ಇವುಗಳು ಯಾವುದು ತಿಳಿಯದಂತೆ ವರ್ತಿಸುತ್ತಿರುವ ಕೆಇಬಿ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಬೇರಡೆ ವರ್ಗಾವಣೆ ತೆಗೆದುಕೊಂಡು ಹೋಗಬೇಕು ಇಲ್ಲದಿದ್ದಲ್ಲಿ ರೈತರಿಗೆ ಸರಿಯಾಗಿ ವಿದ್ಯುತ್ ಅನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಉದಾಹರಣೆ ಅಂಕಿಹಳ್ಳಿ ( ಶಾಂತನಹಳ್ಳಿ ) ಟ್ರಾನ್ಸ್ಫರೆಂಟ್ ಪೆಟ್ಟಿಗೆ ಸುಟ್ಟು ಹೋಗಿದೆ ಹಲವು ಬಾರಿ ರಿಪೇರಿ ಮಾಡಿಸಲಾಗಿದೆ ದಿನಕ್ಕೆ ೨ ರಿಂದ ೩ ಬಾರಿ ಜಂಪ್ ಹೋಗುತ್ತಿರುತ್ತದೆ .ಇದು ಯಾವುದನ್ನು ಸರಿಪಡಿಸದಿರುವ ಅಧಿಕಾರಿಗಳು ಈ ಭಾಗದ ರೈತರು ಇಡಿ ಶಾಪ ಹಾಕುತ್ತಿದ್ದಾರೆ.

ಈ ಬಾರಿ ಸರಿಯಾಗಿ ವಿದ್ಯುತ್ ನೀಡದೆ ಕಾಫಿ ಗಿಡಗಳಿಗೆ ನೀರು ಹಾಯಿಸಲು ಆಗದೆ ಕಾಫಿ ತೋಟದ ಮಾಲೀಕರು ಕಾಫಿ ಗಿಡಗಳು ಸುಟ್ಟು ಹೋದ ಕಾರಣ ಕೆಇಬಿ ಅಧಿಕಾರಿಗಳಿಗೆ ಧಿಕ್ಕಾರ ಹಾಕುತ್ತಾ ಸಮಸ್ಯೆ ಯಾವಾಗ ಬಗೆಹರಿಸುತ್ತಾರೆ ತಿಳಿಯದು ಎಂದು ಪ್ರಶ್ನಿಸುತ್ತಿದ್ದಾರೆ. ಅತಿ ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸದಿದ್ದರೆ ಇನ್ನು ಒಂದು ವಾರದೊಳಗೆ ಅರೇಹಳ್ಳಿ ವಿದ್ಯುತ್ ಕೇಂದ್ರದ ಮುಂದೆ ಧರಣಿಕೂರಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು