News Karnataka Kannada
Saturday, April 27 2024
ಮೈಸೂರು

ಮೈಸೂರು: ಹುಣಸೂರಿನ ಲಕ್ಷ್ಮಣತೀರ್ಥ ನದಿಗೆ ಕೊಳಚೆ ನೀರು, ನದಿ ಸಂರಕ್ಷಣೆಗೆ ಮನವಿ

Sewage water has been released into Lakshmanatheertha river in Hunsur.
Photo Credit : By Author

ಮೈಸೂರು: ರಾಜ್ಯದ ಜೀವನದಿ ಕಾವೇರಿಯ ಉಪನದಿಗಳಲ್ಲಿ ಲಕ್ಷ್ಮಣತೀರ್ಥ ನದಿಯೂ ಒಂದು. ಈ ನದಿಗೆಧಾರ್ಮಿಕ ಇತಿಹಾಸವಿದೆ. ಆದರೆ,  ಹುಣಸೂರು ನಗರದ ಹೃದಯ ಭಾಗದಲ್ಲಿ ಸುಮಾರು ಒಂದು ಕಿಲೋಮೀಟರ್ ಹರಿದು ಹೋಗಿರುವ ಈ ನದಿಗೆ ಕೊಳಚೆ ನೀರು ಬಿಟ್ಟು ನದಿ ಕೊಳೆತು ನಾರುತ್ತಿದೆ ಎಂದು ಸತ್ಯಂ ಎಂಎಎಸ್ ಫೌಂಡೇಷನ್ ಗೌರವಾಧ್ಯಕ್ಷ ಸತ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಮುನಿ ಕಾಡಿನ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ ಹುಣಸೂರು ನಗರ ಪ್ರವೇಶಿಸುವ ತನಕ ಶುದ್ಧವಾಗಿರುವ  ಲಕ್ಷ್ಮಣತೀರ್ಥ ನದಿ ಹುಣಸೂರು ನಗರ ಪ್ರವೇಶಿಸಿದಾಕ್ಷಣ ಮಲಿನವಾಗಲು ಪ್ರಾರಂಭವಾಗುತ್ತದೆ. ಹುಣಸೂರು ನಗರದ ಹೃದಯ ಭಾಗದಲ್ಲೇ  ಲಕ್ಷ್ಮಣತೀರ್ಥ ನದಿ ಹರಿದರೂ ಈ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಪಕ್ಕದ ತಾಲೂಕು ಕೃಷ್ಣರಾಜನಗರದಿಂದ ಸುಮಾರು ೨೫ ಕಿಲೋಮೀಟರ್ ದೂರದಿಂದ ಕಾವೇರಿ ನದಿ ನೀರನ್ನು ಹುಣಸೂರು ನಗರಕ್ಕೆ ಸರಬರಾಜು ಮಾಡಲಾಗುತ್ತದೆ. ಹುಣಸೂರು ನಗರದ ಹಲವು ಭಾಗಗಳಲ್ಲಿ ಈಗಲೂ ನೀರಿನ ಸಮಸ್ಯೆಯಿದೆ ಎಂದು ವಿವರಿಸಿದರು.

ಹುಣಸೂರು ನಗರದ ಮಧ್ಯೆಯೆ ಲಕ್ಷ್ಮಣತೀರ್ಥ ನದಿ ಹರಿದರೂ ನಗರದ ಕೊಳಚೆ ಚರಂಡಿ ನೀರೆಲ್ಲಾ ನದಿಗೆ ಹರಿದು ವಿಪರೀತ ಸೊಳ್ಳೆಗಳ ಕಾಟ  ಮತ್ತು ಬೇರೆ ಬೇರೆ ರೀತಿಯ ಕಾಯಿಲೆಗಳು ಹರಡಲು ಪ್ರಮುಖ ಕಾರಣವಾಗಿದೆ. ಈ ನದಿ ನೀರು ಮುಂದೆ ಹರಿಯುತ್ತಾ ಕಟ್ಟೆಮಳಲವಾಡಿ ಅಣೆಕಟ್ಟು, ಶಿರೂರು ಅಣೆಕಟ್ಟು, ಮುಖಾಂತರ ಕೃಷ್ಣರಾಜಸಾಗರ ಸೇರುತ್ತದೆ.

ಇದರಿಂದಾಗಿ ಹುಣಸೂರು ನಗರದ ಮುಂದಿನ ಹಳ್ಳಿ, ಊರು, ನಗರದ ಜನರು ಈ ಕೊಳೆತ ಲಕ್ಷ್ಮಣತೀರ್ಥ ನದಿಯ ನೀರನ್ನೇ ಉಪಯೋಗ  ಮಾಡಬೇಕು. ಕೃಷ್ಣರಾಜಸಾಗರ ಅಣೆಕಟ್ಟು ಸೇರುವ ಹುಣಸೂರಿನ ಕೊಳಚೆ ನೀರು ರಾಜಧಾನಿ ಬೆಂಗಳೂರು ಮತ್ತು ಪ್ರಮುಖ ನಗರಗಳಿಗೂ ಕುಡಿಯಲು ಸರಬರಾಜು ಆಗುತ್ತಿದೆ. ಸುಮಾರು ಎರಡು ಕೋಟಿ ಜನರಿಗೆ ಲಕ್ಷ್ಮಣತೀರ್ಥ ನದಿ ನೀರು ಕಾವೇರಿ ನದಿಗೆ ಸೇರ್ಪಡೆಯಾಗಿ ನೀರುಣಿಸುತ್ತಿದೆ. ಅಂದರೆ ಕಲುಷಿತಗೊಂಡಿರುವ ಲಕ್ಷ್ಮಣತೀರ್ಥ ನದಿಯ ನೀರು ಕಾವೇರಿ ನೀರಿನೊಂದಿಗೆ ಬೆರೆತು ಜನರಿಗೆ ಹಲವಾರು ಕಾಯಿಲೆಯಗಳು ಹರಡಲು ಕಾರಣವಾಗಿದೆ ಎಂದು ದೂರಿದರು.

ಕಳೆದ ೨೦ ವರ್ಷಗಳಿಂದ ಆಯ್ಕೆಯಾದ ಶಾಸಕರು ಮತ್ತು ತಾಲೂಕು ಆಡಳಿತ ಮಂಡಳಿ ಇದರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿ ಕೊಳಚೆ  ನೀರು ನದಿಗೆ ಹರಿಯಲು ಬಿಟ್ಟು ಕಣ್ಣುಮುಚ್ಚಿ ಕುಳಿತುಕೊಂಡಿದೆ. ಶಾಸಕರು ಮತ್ತು ತಾಲೂಕು ಆಡಳಿತ ಮಂಡಳಿಯ ನಿರ್ಲಕ್ಷ್ಯ ಬೇಜವಾಬ್ದಾರಿ ಧೋರಣೆಯಿಂದಾಗಿ ಲಕ್ಷ್ಮಣತೀರ್ಥ ನದಿ ಕೊಳೆತು ನಾರುತ್ತಿದೆ. ಹೀಗಾಗಿ ಕಾವೇರಿ ನೀರು ಸೇವಿಸುವ ಎಲ್ಲರೂ ಲಕ್ಷ್ಮಣತೀರ್ಥ ನದಿ ಸಂರಕ್ಷಣೆಯ ಹೋರಾಟ ಮಾಡಬೇಕೆಂದು ಮನವಿ ಮಾಡಿದರು.

ಗ್ರಾ.ಪಂ ಸದಸ್ಯರಾದ ಕುಮಾರ್, ಸಜ್ಜನ್‌ರಾವ್ ಪವಾರ್, ರೈತ ಮುಖಂಡರಾದ ವೆಂಕೋಬರಾವ್ ಜಗತಾಪ್, ಅನಂತೇಗೌಡ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು