ಬೇಲೂರು: ವಿದ್ಯುತ್ ಅವಘ ಡದಿಂದ ಶೆಡ್ ನಲ್ಲಿ ನಿಲುಗಡೆ ಮಾಡಿದ ಆಟೋ ಮತ್ತು ಬೈಕ್ ಸೇರಿದಂತೆ ಇನ್ನೂ ಮುಂತಾದ ವಸ್ತುಗಳು ಭಸ್ಮವಾಗಿರುವ ಘಟನೆ ಬೇಲೂರು ಪಟ್ಟಣದ ಸಮೀಪದ ಚಿಕ್ಕಬ್ಯಾಡಿಗೆರೆ ಗ್ರಾಮದಲ್ಲಿ ನಡೆದಿದೆ.
ಪಟ್ಟಣದ ಸಮೀಪ ಇರುವ ಚಿಕ್ಕಬ್ಯಾಡಿಗೆರೆ ಗ್ರಾಮದ ವಾಸಿಯಾದ ಚಾಲಕ ವಸಂತ್ ಎಂಬುವರಿಗೆ ಸೇರಿದ ಆಟೋ ರಿಕ್ಷಾ ಹಾಗೂ ಬೈಕ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.
ಎಂದಿನಂತೆ ತನ್ನ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದು ತನ್ನ ಮನೆಯ ಪಕ್ಕದಲ್ಲಿ ಇದ್ದ ಶೆಡ್ ನಲ್ಲಿ ಆಟೋ ರಿಕ್ಷಾ ನಿಲ್ಲಿಸಿ ಮಲಗಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ಸಮಯದಲ್ಲಿ ಸಿಡಿದ ಶಬ್ದ ಕೇಳಿ ಹೊರಬಂದು ನೋಡಿದ ತಕ್ಷಣ ಮನೆಯ ಪಕ್ಕದಲ್ಲಿ ಇದ್ದ ಶೆಡ್ ಗೆ ಬೆಂಕಿ ತಗುಲಿದ ಹಿನ್ನೆಲೆ ಯಲ್ಲಿ ಶೆಡ್ಡಿನೊಳಗಿದ್ದ ಆಟೋ ರಿಕ್ಷಾ ಮತ್ತು ಬೈಕ್ ಸೇರಿದಂತೆ ಸಂಪೂರ್ಣ ಬೆಂಕಿ ಆವರಿಸಿದ್ದು ವಿಷಯ ತಿಳಿದು ಸ್ಥಳೀಯ ನಿವಾಸಿಗಳು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿಗಳ ಸಹಕಾರದಿಂದ ಬೆಂಕಿ ನಂದಿಸಿದರಿಂದ ಹೆಚ್ಚಿನ ಆವಗಡ ತಪ್ಪಿಸಿದಂತಾಯಿತು.
ಇದೇ ವೇಳೆ ಆಟೋ ಚಾಲಕ ಮಹೇಶ್ ಮಾತನಾಡಿ ನಾನು ಬಡವನಾಗಿದ್ದು ನಿತ್ಯ ಆಟೋ ಓಡಿಸಿ ಜೀವನ ನಡೆಸುತ್ತಿದ್ದೆ ಆದರೆ ರಾತ್ರಿ ವೇಳೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಹಾನಿಯಿಂದಾಗಿ ನನ್ನ ಕುಟುಂಬಕ್ಕೆ ಆಧಾರವಾಗಿದ್ದ ಆಟೋ ರಿಕ್ಷಾ ಸಂಪೂರ್ಣ ಸುಟ್ಟುಹೋಗಿದ್ದು ನನ್ನ ಮಗನ ದ್ವಿ ಚಕ್ರವಾಹನ ಸ್ಪೆಂಡರ್ ಪ್ಲಸ್ ಬೈಕ್ ಸಹ ಸುಟ್ಟು ಕರಕಲಾಗಿದೆ.
ಹಾಗೂ ನನ್ನ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿದ್ದ ನಮ್ಮ ಜಾನುವಾರುಗಳು ಯಾವುದೇ ಹಾನಿಯಾಗದೆ ದೊಡ್ಡ ದುರಂತ ತಪ್ಪಿದೆ ಕುಟುಂಬಕ್ಕೆ ನಿರ್ವಹಣೆಗೆ ಇದ್ದಂತ ಆಟೋ ರಿಕ್ಷಾ ಸುಟ್ಟು ಹೋಗಿರುವುದು ನಿಜಕ್ಕೂ ದುರಂತ ನಮಗೆ ಗ್ರಾಪಂ ಹಾಗೂ ಸರ್ಕಾರದ ವತಿಯಿಂದ ಸಹಾಯ ಕೊಡಿಸಬೇಕು ಎಂದರು.
ಗ್ರಾಮಸ್ಥ ಕರವೇ ಚಂದ್ರಶೇಖರ್ ಮಾತನಾಡಿ ಬಡ ಕುಟುಂಬ ಇಂದು ಬೆಂಕಿ ಆಹುತಿ ಯಿಂದ ಜೀವನ ನಿರ್ವಹಣೆಗೆ ಇದ್ದಂತ ವಾಹನ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಗ್ರಾಪಂ ಇಂದ ಹಾಗೂ ಶಾಸಕರು ಈ ಕುಟುಂಬಕ್ಕೆ ಯಾವುದಾದರೂ ಒಂದು ರೀತಿಯಲ್ಲಿ ಸಹಾಯ ಮಾಡಬೇಕು. ಸುಮಾರು ೧ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ವಸ್ತುಗಳು ಸಂಪೂರ್ಣ ನಾಶವಾಗಿದ್ದು ಇವರಿಗೆ ಪರಿಹಾರ ಕೊಡುಸಬೇಕೆಂದು ಮನವಿ ಮಾಡಿದರು.