News Karnataka Kannada
Sunday, May 12 2024
ಹಾಸನ

ಹಾಸನ:  ವಿದ್ಯುತ್ ಸಮಸ್ಯೆ ಬಗೆಹರಿಸಲು ಕ್ರಮ!

Steps taken to solve the power problem
Photo Credit : News Kannada

ಹಾಸನ: ನಗರದ ಕೆ.ಆರ್. ಪುರಂ ಬಡಾವಣೆ ಸೇರಿದಂತೆ ಹಲವು ಪ್ರತಿಷ್ಟಿತ ಬಡಾವನೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯದ ಸಮಸ್ಯೆಯನ್ನು ಶೀಘ್ರವಾಗಿ ಬಗೆ ಹರಿಸಲಾಗುವು ದು ಎಂದು ಶಾಸಕ ಪ್ರೀತಂ ಜೆ.ಗೌಡ ಭರವಸೆ ನೀಡಿದ್ದಾರೆ.

ವಿದ್ಯುತ್ ವ್ಯತ್ಯಯದಿಂದ ಅಗುತ್ತಿರುವ ಸಮಸ್ಯೆಗಳ ಕುರಿತು ಶಾಸಕರ ಗಮನವನ್ನು ಅಮೋಘ್ ವಾಹಿನಿ ಸೆಳೆದಾಗ ಮಾತನಾಡಿದ ಅವರು, ಇಂದು ಈ ಕುರಿತು ಚೆಸ್ಕಾಂನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿದ್ದೆನೆ. ಸಭೆಯಲ್ಲಿ ವಿಷೇಶವಾಗಿ ಕೆ.ಅರ್. ಪುರಂ ಬಡಾವಣೆಯ ಸಮಸ್ಯೆ ಚರ್ಚೆ ಮಾಡಿದ್ದೆನೆ.

೬೫ ಕೆವಿ ವಿದ್ಯುತ್ ಲೈನ್ ಹಿಮ್ಸ್ ಅವರಣದಲ್ಲಿ ಅಗಿಲೆ ಗ್ರಾಮದಲ್ಲಿ ಇಂದನ ಸಚಿವರ ಸಹಕಾರದಿಂದ ಮುಂದಿನ ೨೫ ವರ್ಷಕ್ಕೆ ತೊಂದರೆ ಅಗದಂತೆ ಬಹುದೊಡ್ಡ ಯೋಜನೆ ಕಾರ್‍ಯಗತವಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕೆಲವೇ ದಿನಗಳಲ್ಲಿ ದಿನದ ೨೪ ಗಂಟೆ ತಡೆ ರಹಿತ ವಿದ್ಯುತ್ ಸರಬರಾಜು ಮಾಡುತ್ತೆವೆ ಎಂದ ಅವರು, ೨೫ ಹಳ್ಳಿಗಳನ್ನು ನಗರಸಭೆ ಸೇರ್ಪಡೆ ಮಾಡಿ ಕೊಂಡ ಮೇಲೆ ಗ್ರಾಮಾಂತರ ಪ್ರದೇಶಕ್ಕೆ ತೊಂದರೆ ಅಗದಂತೆ ಅಗಿಲೆ ಗ್ರಾಮದಲ್ಲಿ ಮತ್ತು ಕೆ.ಐ.ಡಿ.ಬಿ ಪಕ್ಕದ ಹೊಸ ಬಡಾವಣೆಗಳಿಗೆ ಮತ್ತು ಕೈಗಾರಿಕೆಗಳಿಗೆ ಸರಬರಾಜು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು