ಕುಂದಾಪುರ: ನಮ್ಮ ಪ್ರಯತ್ನ ಮತ್ತು ಭಗವಂತನ ಅನುಗ್ರಹದಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಸದ್ಭಕ್ತರ ಪ್ರಯತ್ನದಿಂದ ಸುಂದರವಾದ ಶಿಲಾಮಯ ದೇಗುಲ ನಿರ್ಮಾಣವಾಗಿದೆ ಮಹಾಂಕಾಳಿ ರೂಪ ಭಯಂಕರವಾದರು ಭಕ್ತರಿಗೆ ಅವಳು ತಾಯಿ ಹೃದಯಿ ದುಷ್ಟರಿಗೆ ಸಿಂಹ ಸ್ವಪ್ನ ಹಿಂದೂ ಸಮಾಜ ಬಾಂಧವರು ಶಾಂತಿ ಪ್ರೀಯರು,ನಮಗೆ ಸಂವಿಧಾನ ಇದೆ ದೈವಿ ಭಕ್ತಿ ಇದೆ ನಿಜವಾದ ಭಕ್ತಿಯಿಂದ ಮಂದಿರ ನಿರ್ಮಾಣವಾಗಿದೆ ಗ್ರಾಮದ ಜನರಿಗೆ ತಾಯಿ ಒಳಿತನ್ನು ಮಾಡಲಿ ಎಂದು ಪೇಜಾವರ ಮಠ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜೀ ನುಡಿದರು.
ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ನವೀಕೃತ ಶಿಲಾದೇಗುಲ ಲೋಕಾರ್ಪಣೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮಹಾಂಕಾಳಿ ಅಮ್ಮನವರ ವಠಾರದಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು.
ಆದಿ ಅಂತ್ಯವಿಲ್ಲದ ಸಾಗರದಲ್ಲಿ ಕೆಲಸ ಮಾಡುವ ಖಾರ್ವಿ ಸಮಾಜ ಭಾಂದವರ ಬದುಕು ಹೋರಾಟದಿಂದ ಕೂಡಿದೆ ಸಂಕಲ್ಪ ಶ್ರದ್ಧೆ ಭಕ್ತಿ ಮತ್ತು ಪರಿಶ್ರಮದಿಂದ ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ಶಿಲಾದೇಗುಲದ ನಿರ್ಮಾಣದ ಕಾರ್ಯ ಅಲ್ಪ ಅವಧಿಯಲ್ಲಿ ನಡೆದಿರಿವುದು ದೇವಾನುಗ್ರಹದ ಕೃಪೆಯಿಂದ ಅಯೋಧ್ಯೆಯಲ್ಲಿ ಮೆಳೈಸಿದ ಇತಿಹಾಸ ಗಂಗೊಳ್ಳಿಯಲ್ಲಿ ಮರುಕಳಿಸಿದೆ ಎಂದರು.
ಪೇಜಾವರ ಮಠ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜೀ ಅವರನ್ನು ಗಂಗೊಳ್ಳಿ ರಾಮ ಮಂದಿರದಿಂದ ಮಹಾಂಕಾಳಿ ಅಮ್ಮನವರ ಸನ್ನಿಧಾನದ ವರಗೆ ಭವ್ಯ ಮೆರವಣಿಗೆ ಮೂಲಕ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.