News Karnataka Kannada
Sunday, May 05 2024
ಹಾಸನ

ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ಗಳಿಂದ ಕಮಿಷನ್ ದಂಧೆ!

Belur government hospital!
Photo Credit : News Kannada

ಬೇಲೂರು: ಸಾಮಾನ್ಯವಾಗಿ,ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಬಹುತೇಕ ಬಡವರು.ಸಾಮಾನ್ಯ ವರ್ಗದವರು.ದಿನವಿಡೀ ಕೂಲಿ ಮಾಡಿ, ಹಣವನ್ನು ಹೊಟ್ಟೆ ಬಟ್ಟೆ ಕಟ್ಟಿ,ಮುಂದೆ ಕಷ್ಟ ಕಾಲದಲ್ಲಿ ಬೇಕಾಗಬಹುದು ಎಂಬುದು ಕೆಲವರದ್ದಾದರೆ. ಇನ್ನೂ ಕೆಲವರು ಆ ಹೊತ್ತಿನ ಹೊಟ್ಟೆ ಪಾಡಿಗಾಗಿ, ಅಲ್ಪ ಸ್ವಲ್ಪ ಹಣ ಕೂಡಿಟ್ಟುವುದು ಬಡ ಜನರ ಬದುಕು.

ಆದರೆ, ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ,ಮಾತ್ರ ಉಚಿತ ೧೦೮ ಆಂಬುಲೆನ್ಸ್ ಇದ್ದರೂ. ಕೂಡ, ಅದನ್ನು ಬಳಕೆ ಮಾಡುವ ಬದಲು ಜನನಿ ಸುರಕ್ಷಾ ಯೋಜನಾ ಆಂಬುಲೆನ್ಸ್ ಬಳಸಿ, ಢೀಸೆಲ್ ಗೆಂದು, ರೋಗಿಗಳ ಹತ್ತಿರ, ೮೦೦ ರಿಂದ ೯೦೦ ರೂ. ಹಣ ವಸೂಲಿ ದಂಧೆ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಇಲ್ಲಿನ ಆರೋಗ್ಯಾಧಿಕಾರಿಗಳು ಕಾರಣ ಎಂದು ಸಾರ್ವ ಜನಿಕರು ಆರೋಪ ಮಾಡಿದ್ದಾರೆ.

ಕಳೆದ ಕೆಲ ವರ್ಷದಿಂದಲೂ, ಇದೆ ಚಾಳಿಯನ್ನು ಆರೋಗ್ಯಾಧಿಕಾರಿಗಳು ಮುಂದುವರಿಸುತ್ತಲೇ ಬಂದಿದ್ದು, ಇದಕ್ಕೆ ತಾಲ್ಲೂಕಿನ ಶಾಸಕರ ಬೇಜವಾಬ್ದಾರಿ ತನವೋ ಅಥವಾ ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯವೋ ಗೊತ್ತಿಲ್ಲ. ಅಕಸ್ಮಾತ್ ಅಪಘಾತದಿಂದಲೋ, ಅಥವಾ ಗರ್ಭಿಣಿಯರು, ನೋವಿನಿಂದ ನರಳಿ ಬಂದರೆ ಅಥವಾ ಹೃದಯಘಾತ ಸಂಬಂಧ ರೋಗಿಗಳು ಬಂದರೆ ಉಚಿತ ಆಂಬುಲೆನ್ಸ್‌ಗೆ ಕಳಿಸದೆ, ಬೇರೆ ವಾಹನ ನೋಡಿಕೊಳ್ಳಿ ಎಂದು ಅಸಭ್ಯ ಧೋರಣೆಯಿಂದ ಕೆಲ ವೈದ್ಯರು, ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆಯ ಬದಲು, ಕಮಿಷನ್ ಆಸೆಗೆ ಖಾಸಗಿ ಆಸ್ಪತ್ರೆಗೆ ಕಳಿಸಿ ಕೊಡುವ ಚಾಳಿಯೂ ಹೆಚ್ಚಾಗಿದೆ.

ಇತ್ತ ಡೀಸಲ್ ಖರ್ಚು ಬೇಕು. ಅತ್ತ ಖಾಸಗಿ ಆಸ್ಪತ್ರೆ ಕಮಿಷನ್ ಬೇಕು. ಇಂತಹ ಘಟನೆಗಳು ವಾರಕ್ಕೊಂದರಂತೆ ನಡೆಯುತ್ತಲೆ ಇವೆ. ಕೆಲ ಸಂದರ್ಭ ರಾತ್ರಿ ವೇಳೆಯಲ್ಲಂತು ರೋಗಿಗಳು ಆಸ್ಪತ್ರೆಗೆ ಬಂದರೆ ಸಾಕು, ಅವರನ್ನು ನೋಡಿ, ಅಥವಾ ವಿಚಾರಿಸುವಂತಹ ತಾಳ್ಮೆಯೂ ಇಲ್ಲದೆ, ಜಿಲ್ಲಾಸ್ಪತ್ರೆಗೆ ಕಳಿಸುವುದರಲ್ಲಿ ಮಾತ್ರ ನಂಬರ್ ಒನ್ ಆಗಿದೆ .

ಆದರೆ ಕೇಳೋರು ಮಾತ್ರ ಯಾರು ಇಲ್ಲ. ಇತ್ತ ಉಚಿತ ಆಂಬುಲೆನ್ಸ್ ಮೇಲೆ ಶಾಸಕರ ಮತ್ತು ಸಂಸದರ ಫೋಟೋ ಮಾತ್ರ ರಾರಾಜಿಸುತ್ತಿದೆ. ಅದರಿಂದಾಗುವ ದಂಧಗೆ ಮಾತ್ರ ಕಡಿವಾಣ ಬಿಳದಿರುವುದು ಮಾತ್ರ ದುರಂತವೇ ಸರಿ. ಹಾಗಾದ್ರೆ ಆಂಬುಲೆನ್ಸ್ ಶಾಸಕರ ಸ್ವಂತದ್ದೋ…ಅಥವಾ ಸರ್ಕಾರ ದ್ದೋ..ಎಂಬ ಮಾತು ರೋಗಿ ಗಳ ಬಾಯಲ್ಲಿ ಕೇಳಿ ಬರುತ್ತಿದೆ.

“ಔಷಧಿ ಮಾತ್ರೆಗೆ ಖಾಸಗಿ ಮೆಡಿಕಲ್ “
ಇನ್ನೂ..ಆಸ್ಪತ್ರೆ ಕೆಲ ವೈದ್ಯರು ಖಾಸಗಿ ಕ್ಲೀನಿಕ್ ಮಾಡಿಕೊಂಡು ಸಮಯ ೩ ಗಂಟೆ ಆಗುವುದನ್ನೆ ಕಾಯ್ದ, ಕ್ಲೀನಿಕ್‌ಗೆ ಜಾರಿಕೊಳ್ಳುತ್ತಾರೆ. ಎರಡನೆ ಪಾಳಿಯದಲ್ಲಿ ಕೆಲಸ ಮಾಡುವ ವೈದ್ಯರು ೪ ರಿಂದ ೫ ಗಂಟೆಗೆ ಬರುವಷ್ಠರಲ್ಲಿ ರೋಗಿಗಳ ಕಥೆ ಮುಗಿದೇ ಹೋಯ್ತು ಎಂಬುದು ರೋಗಿಗಳ ಕಥೆ. ಇನ್ನೂ ಆಸ್ಪತ್ರೆಯ ಔಷದಿ ಮಳಿಗೆಗೆ ಚೀಟಿ ಬರೆಯದೆ, ಪ್ರಧಾನ ಮಂತ್ರಿ ಜನೌಷದಿ ಕೇಂದ್ರಕ್ಕೂ ಬರೆಯದೆ ಖಾಸಗಿ ಮಡಿಕಲ್ ಗೆ ಚೀಟಿ ಬರೆಯುತ್ತಾರೆ ಎಂಬ ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ಆಸ್ಪತ್ರೆ ನೋಡಿದರೆ ಹೈಟೆಕ್. ಊಟದಲ್ಲೂ ಮೋಸ, ಔಷಧಿ ಮಾತ್ರೆಯಲ್ಲೂ ಮೋಸ. ಸ್ಕ್ಯಾನಿಂಗ್ ಮೆಷಿನ್‌ಗೆ ಆಸ್ಪತ್ರೆಯಲ್ಲಿ ದಿನ ಬೆಳಗಾದರೆ ಊದುಬತ್ತಿ ಹಚ್ಚಿ ಪೂಜೆ ಮಾಡುವ ಕೆಲಸ ಮುಂದುವರಿದಿದೆ. ಅದರ ಉಪಯೋಗ ಮಾತ್ರ ರೋಗಿಗಳಿಗೆ ಸಿಗದೆ, ಜಿಲ್ಲೆಯ ಸ್ಕ್ಯಾನಿಂಗ್ ಖಾಸಗಿ ಸೆಂಟರ್‌ಗಳಿಗೆ ಚೀಟಿ ಬರೆದು ಅಲ್ಲಿಯೂ ಕಮಿಷನ್ ಗಿಟ್ಟಿಸಿಕೊಳ್ಳುವುದಂತೂ ನಿಂತಿಲ್ಲ.

ಡಿಹೆಚ್‌ಓ ಶಿವಸ್ವಾಮಿ ಹೇಳಿದ್ದು ಹೀಗೆ
ಹಾಗಾದ್ರೆ,”ಆಂಬುಲೆನ್ಸ್ ಸೇವೆಗೆ. ಎಷ್ಟು ಹಣ ನೀಡ ಬೇಕು.” ಸರ್ಕಾರದ ಆದೇಶದಂತೆ ಕಿ.ಮೀ ಗೆ ೨.ರೂ ನಂತೆ ಬೇಲೂರಿನಿಂದ ಹಾಸನ ನಗರಕ್ಕೆ ಕೇವಲ ೭೦ ರಿಂದ ೮೦ ರೂ ಪಡೆಯಬೇಕು. ಅದಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಡೀಸೆಲ್ ಗೆಂದು ರೋಗಿಗಳ ಬಳಿ ಹಣ ಕೇಳುವಂತಿಲ್ಲ. ಡಿಸೇಲ್ ತುಂಬಿಸುವ ಜವಾಬ್ದಾರಿ ಆಯಾ ಇಲಾಖೆಗೆ ಸಂಭಂದಿಸಿದ್ದು. ಒಂದು ವೇಳೆ ಹಣ ಕೇಳಿದರೆ, ಕಾನೂನು ಬಾಹಿರ ವಾಗಿರುತ್ತದೆ. ಯಾವುದೆ ಕಾರಣಕ್ಕೆ ರೋಗಿಗಳಿಗೆ ತೊಂದರೆ ನೀಡಬಾರದು. ಅಂತಹ ಘಟನೆಗಳು ಮರುಕಳಿಸಿದರೆ, ಸಂಭಂದಪಟ್ಟ ಆಡಳಿತಾಧಿಗಳ ವಿರುದ್ದ ಕ್ರಮ ಕೈಗೊಳ್ಳಲಾಗು ವುದು. ಇನ್ನದರೂ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ, ಉಚಿತ ಆಂಬುಲೆನ್ಸ್ ದೊರೆಯಲಿ ಎಂಬುದೆ ನಮ್ಮೆಲ್ಲರ ಆಶಯ.

“ನೇತ್ರಾವತಿ ಎಂಬ ಮಹಿಳೆಯ ಅಳಲು”
ಕಳೆದ ವಾರವಷ್ಟೆ ,ನನಗೆ ಹೆರಿಗೆ ಸಮಯದಲ್ಲಿ ಆಸ್ಪತ್ರೆಗೆ ಬಂದೆ.ನಮಗೆ ಉಚಿತ ಆಂಬುಲೆನ್ಸ್ ನೀಡದೆ,ಎSಙ ಆಂಬುಲೆನ್ಸ್ ನ್ನೂ ಕಳಿಸದೆ, ಹೆರಿಗೆ ನೋವಿನಿಂದ ಸುಮಾರು ಅರ್ಧ ಗಂಟೆ ನರಳಾಡಿದರೂ, ಒಂದು ಸಾವಿರ ರೂ, ಡೀಸಲ್ ಹಾಕಿಸಿ, ಇಲ್ಲವಾದರೆ ಖಾಸಗಿ ವಾಹನ ಮಾಡಿಕೊಂಡು ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಉಢಾಫೆಯಿಂದ ಸಿಬ್ಬಂದಿಗಳು ಮಾನಸಿಕವಾಗಿ ತೊಂದರೆ ನೀಡಿದರು. ಸದ್ಯಕ್ಕೆ ನಮ್ಮ ಬಳಿ ಹಣವಿಲ್ಲದ ಕಾರಣ, ಇಂತಹ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಬರಬಾರದು ಎಂದು ಖಾಸಗಿ ವಾಹನ ಹುಡುಕಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದೆವು ಎಂದು ಅಳಲು ತೋಡಿಕೊಂಡರು. ಹಾಗಾದ್ರೆ ಆಂಬುಲೆನ್ಸ್ ನ ಮೂಲಕ ನಡೆಯುತ್ತಿರುವ ಹಣ ವಸೂಲಿ ದಂಧೆಗೆ ಯಾರು ಹೊಣೆ..? ತಾಲ್ಲೂಕು ವೈಧ್ಯಾಧಿಕಾರಿ, ವಿಜಯ್ ಕುಮಾರ್ ರವರಾ… ಅಥವಾ , ಆಸ್ಪತ್ರೆ ಜವಾಬ್ದಾರಿ ನಿರ್ವಹಿಸುತ್ತಿರುವ ಸತೀಶ್ ರವರಾ, ಶಾಸಕ ಕೆ.ಎಸ್ ಲಿಂಗೇಶ್ ರವರ ನಿರ್ಲಕ್ಷ್ಯವೋ ಎಂಬುದು ಮಾತ್ರ ನಿಗೂಢ. ಕೂಡಲೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ದಂಧೆಗೆ ಕಡಿವಾಣ ಹಾಕಿ, ಉಚಿತ ಆಂಬುಲೆನ್ಸ್ ಸೇವೆಯನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡಬೇಕೆಂದು ನೊಂದ ರೋಗಿಗಳ ಆಶಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು