ಅರಸೀಕೆರೆ: ಬಾಣಾವರ ಸಾರಿಗೆ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಅಂತ ಪ್ರಾರಂಭವಾಗಿದ್ದು ಪ್ರಾರಂಭದ ಹಂತವಾದ ತಳಪಾಯದಲ್ಲಿಯೇ ಕಳಪೆ ಕಾಮಗಾರಿ ಮಾಡಿರುವುದು ಸಾರ್ವಜನಿಕ ವಾಗಿಯೇ ಕಾಣುತ್ತಿದೆ.
ಯಾವುದೇ ಒಂದು ಮನೆಯಾಗಲಿ ಕಟ್ಟಡವಾಗಲಿ ಸುಭದ್ರವಾಗಿರಲು ಆ ಮನೆಯ ಅಥವಾ ಕಟ್ಟಡದ ತಳಪಾಯ ಬಹು ಮುಖ್ಯವಾಗಿರುತ್ತದೆ ಆದರೆ ಈ ವಾಣಿಜ್ಯ ಮಳಿಗೆಗಳ ನಿರ್ಮಾಣ ಹಂತದಲ್ಲಿ ಸುಭದ್ರವಾಗಿರುವ ತಳಪಾಯ ಕಂಡುಬಂದಿಲ್ಲ. ಇಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಹಂತದಲ್ಲಿ ನಡೆಯುತ್ತಿರುವ ಕಾಮಗಾರಿಯ ತಳಪಾಯ ಮತ್ತು ಪಿಲ್ಲರ್ ಗಳನ್ನು ಹಾಕುತ್ತಿರುವ ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಳಪಾಯವನ್ನ ಮಾಡಲು ಕಳಪೆ ಕಾಮಗಾರಿಗಳನ್ನ ಬಳಸಿದ್ದಲ್ಲದೆ ಹಾಗೂ ಯಾವುದೇ ಒಂದು ಪಿಲ್ಲರ್ ಹಾಕಲು ಸರಿಯಾದ ವ್ಯವಸ್ಥಿತವಾದ ಗುಂಡಿಗಳನ್ನ ಮೊದಲು ತೆಗೆದು ನಂತರ ಪಿಲ್ಲರ್ ಗಳನ್ನು ಅಳವಡಿಸುವುದನ್ನು ನೋಡಿದ್ದೇವೆ ಆದರೆ ಈ ಗುತ್ತಿಗೆದಾರಪ ಬೇಕಾಬಿಟ್ಟಿ ಪಿಲ್ಲರ್ ಕಂಬಗಳನ್ನ ಹಾಗೆ ನಿಲ್ಲಿಸಿ ಬೂದಿ ಅಂತ ಮಣ್ಣಿನಿಂದ ಮುಚ್ಚಿರುವುದು ಕಳಪೆ ಕಾಮಗಾರಿಯನ್ನು ಮಾಡಿರುವುದು ಕಂಡುಬಂದಿದೆ.
ಅಷ್ಟೇ ಅಲ್ಲದೆ ಯಾವುದೇ ನಗರಸಭೆಯ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಥವಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಂಬಂಧ ಪಟ್ಟ ಇಲಾಖೆಗಳಿಂದ ಅನುಮತಿಯನ್ನು ಪಡೆದು ಕಟ್ಟಡವನ್ನು ನಿರ್ಮಾಣ ಮಾಡಬೇಕು ಆದರೆ ಇಲ್ಲಿ ನಡೆಯುತ್ತಿರುವ ಕಾಮಗಾರಿಯನ್ನ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿಯ ಅನುಮತಿ ಪಡೆದೆ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಕೂಡಲೇ ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಸಾರಿಗೆ ಇಲಾಖೆಯ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಗುತ್ತಿಗೆದಾರನಿಗೆ ವ್ಯವಸ್ಥಿತವಾಗಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನ ಮುಂದುವರಿಸಲು ತಿಳಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.