ಶ್ರವಣಬೆಳಗೊಳ: ಯುಗಲ ಮುನಿಗಳಾದ ಪರಮಪೂಜ್ಯ ಮುನಿಶ್ರಿ ೧೦೮ ಅಮೋಘಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ ಮುನಿಶ್ರೀ ೧೦೮ ಅಮರಕೀರ್ತಿ ಮಹಾರಾಜರು ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಮಂಗಲ ಪ್ರವೇಶ ಮಾಡಿದರು.
ಕ್ಷೇತ್ರಕ್ಕೆ ಆಗಮಿಸಿದ ಮುನಿಗಳನ್ನು ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ಮೈಸೂರು ರಸ್ತೆ ಮೂಲಕ ಆಗಮಿಸಿದ ಮುನಿಗಳನ್ನು ನಾಗಯ್ಯನಕೊಪ್ಪಲು ಸರ್ಕಲ್ ನಲ್ಲಿ ನೂರಾರು ಶ್ರಾವಕ, ಶ್ರಾವಕಿಯರು, ವಿದ್ಯಾರ್ಥಿಗಳು ಮಂಗಲ ಜಯಘೋಷದೊಂದಿಗೆ ಬರಮಾಡಿಕೊಂಡು, ೧೦೮ ಕಲಶ, ಮೈಸೂರು ಬ್ಯಾಂಡ್ ಸೆಟ್, ಮಂಗಳ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಕರೆತಂದರು.
ಕ್ಷೇತ್ರಕ್ಕೆ ಆಗಮಿಸಿದ ಮುನಿಗಳು ವರ್ಷದ ಚಾತುರ್ಮಾಸ್ಯವನ್ನು ಶ್ರವಣಬೆಳಗೊಳದಲ್ಲಿ ಆಚರಿಸಲಿದ್ದಾರೆ.