News Karnataka Kannada
Sunday, May 05 2024
ಹಾಸನ

ಶ್ರವಣಬೆಳಗೊಳಕ್ಕೆ ಅಮೋಘಕೀರ್ತಿ, ಅಮರಕೀರ್ತಿ ಮಹಾರಾಜ ಶ್ರೀಗಳ ಮಂಗಲ ಪ್ರವೇಶ

Sri's mangala entry to Shravanabelagola
Photo Credit : News Kannada

ಶ್ರವಣಬೆಳಗೊಳ: ಯುಗಲ ಮುನಿಗಳಾದ ಪರಮಪೂಜ್ಯ ಮುನಿಶ್ರಿ ೧೦೮ ಅಮೋಘಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ ಮುನಿಶ್ರೀ ೧೦೮ ಅಮರಕೀರ್ತಿ ಮಹಾರಾಜರು ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಮಂಗಲ ಪ್ರವೇಶ ಮಾಡಿದರು.

ಕ್ಷೇತ್ರಕ್ಕೆ ಆಗಮಿಸಿದ ಮುನಿಗಳನ್ನು ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ  ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.

ಮೈಸೂರು ರಸ್ತೆ ಮೂಲಕ ಆಗಮಿಸಿದ ಮುನಿಗಳನ್ನು ನಾಗಯ್ಯನಕೊಪ್ಪಲು ಸರ್ಕಲ್ ನಲ್ಲಿ ನೂರಾರು ಶ್ರಾವಕ, ಶ್ರಾವಕಿಯರು, ವಿದ್ಯಾರ್ಥಿಗಳು ಮಂಗಲ ಜಯಘೋಷದೊಂದಿಗೆ ಬರಮಾಡಿಕೊಂಡು, ೧೦೮ ಕಲಶ, ಮೈಸೂರು ಬ್ಯಾಂಡ್ ಸೆಟ್, ಮಂಗಳ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಕರೆತಂದರು.

ಕ್ಷೇತ್ರಕ್ಕೆ ಆಗಮಿಸಿದ ಮುನಿಗಳು ವರ್ಷದ ಚಾತುರ್ಮಾಸ್ಯವನ್ನು ಶ್ರವಣಬೆಳಗೊಳದಲ್ಲಿ ಆಚರಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು