ಆಲೂರು: ಪಾಳ್ಯ ಹೋಬಳಿಯಲ್ಲಿ ನಗರದ ಮಧ್ಯದಲ್ಲಿ ಮದ್ಯಪಾನ ಅಂಗಡಿ ಇರುತ್ತದೆ ಅಂಗಡಿಯ ಹಿಂಭಾಗದಲ್ಲಿ ಸರ್ಕಾರಿ ಕೆರೆ ಇರುತ್ತದೆ ನಂತರ ಅದರ ಪಕ್ಕದಲ್ಲಿ ಬೆಂಗಳೂರು ಮಂಗಳೂರು ಮುಖ್ಯ ರಸ್ತೆ ಇರುತ್ತದೆ ಮದ್ಯಪಾನ ಪ್ರಿಯರಿಗೆ ಮುಖ್ಯ ರಸ್ತೆಯಿಂದ ತಿರುಗಾಡಲು ಅನುಕೂಲ ಆಗಲಿ ಎಂದು ಸರ್ಕಾರಿ ಕೆರೆಯ ಮಧ್ಯದಲ್ಲಿ ನೂರಾರು ಲಾರಿ ಮಣ್ಣನ್ನು ತಂದು ಕೆರೆಯನ್ನು ಮುಚ್ಚಿಸಿ ಸುಮಾರು ೩೦ ಅಡಿ ಅಗಲ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಮಧ್ಯಪಾನ ಅಂಗಡಿಯಿಂದ ಖಾಲಿ ಬಾಟಲ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಪಕ್ಕದಲ್ಲಿರುವ ಕೆರೆಗೆ ತಂದು ರಾಶಿ ರಾಶಿ ಸುರಿದು ಪರಿಸರ ಹಾಳು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಧನಕರಗಳು ನೀರು ಕುಡಿಯಲು ಹಾಗೂ ಆಹಾರ ಸೇವನೆ ಮಾಡಲು ಕೆರೆಗೆ ಬರುತ್ತವೆ ಇಂಥ ಜಾಗದಲ್ಲಿ ಮನಸೋ ಇಚ್ಛೆ ಪ್ಲಾಸ್ಟಿಕ್ ಬಾಟಲು ಡಬ್ಬಿಗಳ ತಂದು ಸುರಿಯಲು ಮುಂದಾಗಿ ದ್ದಾರೆ. ಇದೇ ಕೆರೆಗೆ ಮತ್ತೊಂದು ಬದಿಯಲ್ಲಿ ಕೆರೆ ಸುತ್ತಲೂ ಮಣ್ಣುಗಳನ್ನು ತಂದು ಕೆರೆಯ ಒಳಗಡೆ ಸುರಿದು ಪಕ್ಕದಲ್ಲಿರುವ ಇವರ ಜಾಗವನ್ನು ಅಗಲ ಮಾಡಿಕೊಂಡು ಸರ್ಕಾರಿ ಕೆರೆಯನ್ನು ಹೊತ್ತುವರಿ ಮಾಡಲಾಗಿದೆ.
ಇಷ್ಟೆಲ್ಲ ದೊಡ್ಡಮಟ್ಟದ ಕೆರೆ ಕಬಳಿಕೆಯನ್ನು ಮುಖ್ಯರಸ್ತೆ ಪಕ್ಕದಲ್ಲಿ ನಡೆದರು ಆಲೂರು ತಾಲೂಕು ತಹಶೀಲ್ದಾರ್ ಆಗಲಿ ಅಥವಾ ಅಧಿಕಾರಿಗಳು ಆಗಲಿ ಇತ್ತ ಕಡೆ ಮುಖ ಮಾಡದೆ ಇರುವುದು ಅನುಮಾನ ಶುರುವಾಗಿದೆ ಕೆರೆಯ ಪಕ್ಕದಲ್ಲಿ ಹೋಬಳಿ ನಾಡಕಚೇರಿ ಇರುವುದರಿಂದ ಎಲ್ಲಾ ಅಧಿಕಾರಿಗಳಿಗೆ ಈ ವಿಷಯ ತಿಳಿದಿರುತ್ತದೆ ಆದರೂ ಇತ್ತ ಕಡೆ ಗಮನ ಹರಿಸದೆ ಇರುವುದು ಎಷ್ಟರಮಟ್ಟಿಗೆ ಸರಿ ಇದರಲ್ಲಿ ಇವರಿಗೆಷ್ಟು ಪಾಲು ಎಂದು ಅಧಿಕಾರಿಗಳ ಮೇಲೆ ಅನುಮಾನ ಉಂಟಾಗಿದೆ. ಇಷ್ಟೆಲ್ಲ ಭ್ರಷ್ಟಾಚಾರ ನಡೆಸಿರುವುದಾದರೂ ಯಾರೆಂದು ನೋಡುವುದಾದರೆ ಪಾಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಯಾಣ್ ಕುಮಾರ್ ಎಂದು ತಿಳಿದು ಬಂದಿದೆ.
ಕಲ್ಯಾಣ್ ಕುಮಾರ್ ಸಾರ್ವ ಜನಿಕರಿಗೆ ಸಹಾಯ ಮಾಡುವ ಬದಲು ಸಾರ್ವಜನಿಕರ ಆಸ್ತಿಯನ್ನು ಭೂ ಕಬಳಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ಲಾಸ್ಟಿಕ್ ಡಬ್ಬಿ ಬಾಟಲ್ ಗಳನ್ನು ಸರ್ಕಾರಿ ಕೆರೆಗೆ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಕ್ರಮ ತೆಗೆದುಕೊಳ್ಳಬೇಕಾದವರೇ ಪ್ರಕೃತಿಯನ್ನು ಹಾಳು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಾನ್ಯ ತಹಶೀಲ್ದಾರ್ ಅವರೇ ಅತಿ ಶೀಘ್ರದಲ್ಲಿ ಈ ವಿಚಾರವಾಗಿ ತನಿಖೆ ನಡೆಸಿ ಕೂಡಲೇ ಸಂಭಂದ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗಿದೆ ಇಲ್ಲವಾದಲ್ಲಿ ಜಿಲ್ಲಾದಿ ಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳು ಎಚ್ಚರಿಸಿದ್ದಾರೆ.