ಹಾಸನ: ಬಾಲಪ್ರತಿಭೆ ಟೀಷ್ಮಾ ಗೌಡ ಕೆ. ಆರ್. ಅವರನ್ನು “ಅಭಿನವ ಶಾರದೆ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ. ಸುಜ್ಞಾನ ವಿದ್ಯಾಪೀಠ ಮತ್ತು ಶ್ರೀ ಮಾತಾ ಪ್ರಕಾಶನ ಕರ್ನಾಟಕ ಹಾಗೂ ದೆಹಲಿ ದಿ ಜರ್ನಿ ಆಫ್ ಸೊಸೈಟಿ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಸಂಸ್ಥೆ ಸಂಸ್ಥಾಪಕರಾದ ಡಾ.ನಾಗರಾಜ ತಂಬ್ರಹಳ್ಳಿ ಈ ಬಗ್ಗೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕುಮಾರಿ ಟೀಷ್ಮಾ ಗೌಡ. ಕೆ. ಆರ್. ಹಾಸನದಲ್ಲಿ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು. ಸಾಂಸ್ಕೃತಿಕ, ಸಾಹಿತಿಕ, ಶೈಕ್ಷಣಿಕ, ಸಾಮಾಜಿಕ, ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಶಿಕ್ಷಕಿ ಹೆಚ್ ಎಸ್ ಪ್ರತಿಮಾ ಹಾಸನ್ ಅವರ ಪ್ರಥಮ ಪುತ್ರಿಯಾಗಿದ್ದು. ಜಿಲ್ಲಾ ಮಟ್ಟದ ನೃತ್ಯಗಾರ್ತಿಯಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿದೆ. ಪುಟ್ಟ ಕಥೆಗಳು ಸಹ ಪ್ರಕಟವಾಗಿದೆ. ಹಲವಾರು ಸಮ್ಮೇಳನಗಳಲ್ಲಿ ಅಭಿನಂದನ ಪತ್ರಗಳನ್ನು ಪಡೆದಿರುತ್ತಾರೆ.