ಹಾಸನ: ಉರಿಗೌಡ-ನಂಜೇ ಗೌಡ ಹೆಸರಿನಲ್ಲಿ ಈ ಸಮಾಜಕ್ಕೆ ಕಳಂಕ ಬರುವ ರೀತಿ ಮಾಡಿದ್ದಾರೆ ನಮ್ಮ ಸಮಾಜದವರು ಹಿಂಬದಿಯಿಂದ ಚೂರಿ ಹಾಕುವವರಲ್ಲ ನೇರವಾಗಿ ಹೋರಾಟ ಮಾಡುವಂತಹವರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ.
ಸಕಲೇಶಪುರ ಪಂಚರತ್ನ ಯಾತ್ರೆವೇಳೆ ಹಾಸನ ಜಿಲ್ಲೆ, ಶುಕ್ರವಾರಸಂತೆಯಲ್ಲಿ ಮಾತನಾಡಿದ ಅವರು ಸಚಿವ ಮುನಿರತ್ನ ಬ್ಯಾನರ್ನಲ್ಲಿ ಉರಿಗೌಡ ನಂಜೇ ಗೌಡ ಟೈಟಲ್ ರಿಜಿಸ್ಟರ್ ಮಾಡಿರುವವರು ಸರ್ವನಾಶ ಆಗ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಬೂಟಾಟಿಕೆ ಮಾಡುವವರು ಸರ್ವನಾಶ ಆಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನತೆಯ ಮುಗ್ದತನ ದುರುಪಯೋಗ ಮಾಡಿ ಸ್ವಜಾತಿ ಪ್ರೇಮ ಅಂತ ಹೇಳಿ ಸಮಾಜದಲ್ಲಿ ಯಾರಾದರೂ ನೀಚ ಕೆಲಸ ಮಾಡಿದಲ್ಲಿ ಅದರ ವಿರುದ್ದ ಹೋರಾಟ ಮಾಡುವ ಕೆಚ್ಚೆದೆ ಇರುವ ಸಮಾಜ ನಮ್ಮದು ಎಂದರು.
ಲೂಟಿ ಮಾಡಿರಲಿ, ಕೊಲೆ ಮಾಡಿರಲಿ ಅಂತಹವರನ್ನು ಉಳಿಸಿಕೊಳ್ಳಬೇಕು ಎಂಬ ಸಮಾಜ ನಮ್ಮದಲ್ಲ. ನ್ಯಾಯ, ಧರ್ಮ, ಸತ್ಯಕ್ಕೆಹೋರಾಟ ಮಾಡಿರುವ ಸಮಾಜ ಎಂದರು.