News Karnataka Kannada
Saturday, May 04 2024
ಹಾಸನ

ತರಕಾರಿ ವ್ಯಾಪಾರಿಗಳಿಗೆ ತಳ್ಳುಗಾಡಿ ವಿತರಣೆ

Vegetables
Photo Credit :

ಹಾಸನ : ಕಷ್ಟ ಪಟ್ಟು ತರಕಾರಿ ವ್ಯಾಪಾರ ಮಾಡುವ ಬಡವರಿಗೆ ಅನುಕೂಲವಾಗುವಂತೆ ಸುಮಾರು 20 ತಳ್ಳುಗಾಡಿಗಳನ್ನು ನಗರದಲ್ಲಿ ವಿತರಿಸಲಾಯಿತು. ಜೆಡಿಎಸ್  ಮುಖಂಡ ಅಗಿಲೆ ಯೋಗೀಶ್ ಅವರ 49ನೇ ವರ್ಷದ ಜನ್ಮದಿನದ ಪ್ರಯುಕ್ತ ಶ್ರಮ ಜೀವಿಗಳಿಗೆ ಸನ್ಮಾನ ಮತ್ತು ತರಕಾರಿ ಇತರೆ ವ್ಯಾಪಾರ ಮಾಡುವ ಬಡವರಿಗೆ ತಳ್ಳುವ ಗಾಡಿ ವಿತರಣೆ ಕಾರ್ಯಕ್ರಮದಲ್ಲಿ ತಳ್ಳುಗಾಡಿಗಳನ್ನು ವಿತರಿಸುವ ಮೂಲಕ ಗಮನಸೆಳೆಯಲಾಯಿತು.

ಈ ವೇಳೆ ಮಾತನಾಡಿದ ಅಗಿಲೆ ಯೋಗೀಶ್ ಅವರು, ಬೆಳಿಗ್ಗೆ ಎದ್ದು ತಳ್ಳ ಗಾಡಿ ಮೂಲಕ ತರಕಾರಿ ಇತರೆ ವ್ಯಾಪಾರವನ್ನು ಮಾಡಿ ಶ್ರಮದಿಂದ ಜೀವನ ಮಾಡುತ್ತಿರುವವರನ್ನು ಗುರುತಿಸಿ ತಳ್ಳು ಗಾಡಿ ಸಂಘದ ಸದಸ್ಯರಿಗೆ 20 ಗಾಡಿಗಳನ್ನು ಕೊಡುವ ಕಾರ್ಯಕ್ರಮ ನೆರವೇರಿಸಲಾಗಿದೆ. ಕೊರೋನಾ ವೇಳೆಯಲ್ಲಿ ಇವರು ಸಮಸ್ಯೆಯನ್ನು ಎದುರಿಸಿದ್ದು ಅವರಿಗೆ ಅಲ್ಪ ಸಹಾಯ ಮಾಡುವ ಕೆಲಸವನ್ನು ಮಾಡಿರುವುದಾಗಿ ಹೇಳಿದರು.

ಇದೇ ವೇಳೆ ಜೆಡಿಎಸ್ ಮುಖಂಡರಾದ ಬಿದರಿಕೆರೆ ಜಯರಾಮ್, ನಗರಸಭೆ ಸದಸ್ಯ ರಫೀಕ್, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು